News Karnataka Kannada
Friday, May 10 2024
ಮಡಿಕೇರಿ

ಪೊನ್ನಂಪೇಟೆ: ತೂಚಮಕೇರಿ ಪುಟ್ಟಂಗಡ ಚೇತನ ರವರ ಹಸುವನ್ನು ಕೊಂದು ಹಾಕಿದ ಹುಲಿ

Ponnam
Photo Credit : News Kannada

ಪೊನ್ನಂಪೇಟೆ: ಕಳೆದ 15 ದಿವಸದ ಹಿಂದೆ ಬಲ್ಯಮುಂಡೂರು ಗ್ರಾಮದ ಚೇಂದಿರ ಸುರೇಶ ರವರ ಎಮ್ಮೆಯನ್ನು ಕೊಂದು ಹಾಕಿದ ಹುಲಿ ಇಂದು ಮುಂಜಾನೆ ಚೇತನ್ ರವರ ಹಸುವನ್ನು ಕೊಂದು ಹಾಕಿದೆ.

ಕಳೆದ ವರ್ಷ ಇದೇ ಸಮಯದಲ್ಲಿ ಚೇತನ್ ರವರ ಹಸುವನ್ನು ಕೊಂದು ಹಾಕಿತ್ತು, ಮತ್ತೆ ಮತ್ತೆ ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಾಫಿ ತೋಟಗಳಿಗೆ ಕಾರ್ಮಿಕರು ಹೊಗಲು ಭಯಪಡುವಂತಾಗಿದೆ, ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಮೊರ್ಚ ತಾಲೂಕು ಕಾರ್ಯದರ್ಶಿ ಕೊಟ್ಟಂಗಡ ಅಯ್ಯಪ್ಪ ರವರು ಸಿ ಸಿ ಎಫ್ ಮೂರ್ತಿ ರವರು ಹಾಗೂ ಡಿಎಫ್ ಒ ಶರಣಬಸಪ್ಪ ರವರ ಜೊತೆ ಮಾತನಾಡಿ ಇಂದೇ ಬೊನ್ ಇಡುವಂತೆ ಒತ್ತಾಯಿಸಿದ ಮೇರೆಗೆ, ಡಿ ಆರ್ ಎಫ್ ಒ ದಿವಾಕರ್ ಅವರು ಸಿಬ್ಬಂದಿ ಗಳೊಂದಿಗೆ ಸ್ಥಳದಲ್ಲಿಯೇ ಬೊನ್ ಇಡುವ ಕಾರ್ಯಪ್ರವೃತ್ತರಾಗಿದ್ದಾರೆ.

ಕೃಷಿ ಮೊರ್ಚ ತಾಲೂಕು ಅಧ್ಯಕ್ಷ ರಾದ ಕಟ್ಟೆರ ಈಶ್ವರ ರವರು ಪ್ರಧಾನ ಕಾರ್ಯದರ್ಶಿ ತೊರಿರ ವಿನು ರವರು ಅಡ್ಡಂಡ ನಿಲನ್ ರವರು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೆ ಹುಲಿ ಯನ್ನು ಹಿಡಿಯುವಂತೆ ಹಾಗೂ ಪರಿಹಾರವನ್ನು ತಕ್ಷಣವೇ ನೀಡುವಂತೆ ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಪುಟ್ಟಂಗಡ ಮದು,ಪೆಮ್ಮಂಡ ದಿಲನ್,ಕೊಟ್ಟಂಗಡ ಸದಾಶಿವ, ಹಾಗೂ ರೈತರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು