ನಾಪೋಕ್ಲು: ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡವ ಭಾಷೆಯಲ್ಲಿ ಮಾತು ಪ್ರಾರಂಭಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕುಟುಂಬಗಳಲ್ಲಿ ಸದಸ್ಯರ ಸಂಬಂಧ ಉತ್ತಮವಾಗಿರಬೇಕು – ಅದು ಭಾರತದ ಸಮಾಜಕ್ಕೆ ಉತ್ತಮ ಸಂಸ್ಕೃತಿ ಎಂದು ಹೇಳಿದರು.
ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಅಪ್ಪಚೆಟ್ಟೋಳಂಡ 23 ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಶಿಸಿ ಹೋಗುತ್ತಿರುವ ಕೊಡವ ಕುಟುಂಬಗಳ ನಡುವಿನ ಸಂಬಂಧ ಮತ್ತೆ ಬೆಸೆಯಲು ಕೌಟುಂಬಿಕ ಹಾಕಿ ಉತ್ಸವ ಸಹಕಾರಿ ಎಂದರು.
ಭಾರತೀಯ ನಾಗರಿಕತೆ, ನಿಜವಾದ ಸಂಸ್ಕೖತಿಗೆ ಸೂಕ್ತ ಉದಾಹರಣೆ – ಕೊಡವ ಕೌಟುಂಬಿಕ ಹಾಕಿ ಇದಕ್ಕೆ ನಿದಶ೯ನ.
ಹಾಕಿ ಕ್ರೀಡೆಯ ಮೂಲಕ ಕೊಡವರು ತಮ್ಮಲ್ಲಿನ ಉತ್ತಮ ಕೌಟುಂಬಿಕ ಸಂಬಂಧಗಳಿಗೆ ಮಾದರಿಯಾಗಿದ್ದಾರೆ. ನಾವು ಏನು ಆಗಿದ್ದೇವೆ ಅದೇ ಸಂಸ್ಕೃತಿ ಅದನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರದು ಆಗಬೇಕಾಗಿದೆ. ಆಚಾರ ವಿಚಾರ ಸಂಸ್ಕೃತಿಯನ್ನು ಜೋಡಿಸುವ ಈ ಕೌಟುಂಬಿಕ ಹಾಕಿ ಉತ್ಸವ ಯಶಸ್ವಿಯಾಗಲಿ ಹೀಗೆ ನಿತ್ಯ ನಿರಂತರ ಮುಂದುವರಿಯಲಿ ಎಂದರು.
ಕೆ.ಜಿ.ಬೋಪಯ್ಯ ಅವರು ಈ ಹಿಂದೆ ಕ್ರಿಕೆಟ್ ಕ್ರೀಡೆಗೆ ಅನುದಾನ ಕೋರಿ ಬಂದಿದ್ದರು ನಾನು ಇಲ್ಲ ಎಂದು ಹೇಳಿ ಕಳಿಸಿದೆ. ಆದರೆ ಹಾಕಿ ಹಬ್ಬಕ್ಕೆ ಅನುದಾನ ಕೇಳಲು ಬಂದಾಗ ಅವರ ನಿರೀಕ್ಷೆ 50 ಲಕ್ಷ ಇತ್ತು ಆದರೆ ನಾನು ಒಂದು ಕೋಟಿ ರೂಪಾಯಿಯನ್ನು ನೀಡಿದ್ದೇನೆ ಎಂದರು. ಕಾರಣ ಕೊಡಗಿನವರ ಕ್ರೀಡೆ ಹಾಕಿ ಎಂದು ನನಗೆ ತಿಳಿದಿದೆ. ಅದನ್ನು ಪ್ರೋತ್ಸಾಹಿಸೋದು ನಮ್ಮೆಲ್ಲರ ಕರ್ತವ್ಯ ಎಂದರು.
ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ನನ್ನ ತಂದೆ ಎಸ್. ಆರ್ ಬೊಮ್ಮಾಯಿ ಸಚಿವರಾಗಿದ್ದಾಗ ಅನುದಾನ ನೀಡಿದ್ದರು.
ಕೊಡವ ಅಭಿವೃದ್ಧಿ ನಿಗಮ ಆಗಬೇಕೆಂಬ ನಿಮ್ಮ ಬೇಡಿಕೆ ಇದೆ. ಕೊಡವ ಅಭಿವೖದ್ದಿ ನಿಗಮ ಸ್ಥಾಪನೆಗೆ ನಾನು ಕೂಡಲೇ ಆದೇಶ ಹೊರಡಿಸುತ್ತೇನೆ ಎಂದು ಈ ಸಂದರ್ಭ ಘೋಷಿಸಿದರು.
ಕಾಯ೯ಕ್ರಮದಲ್ಲಿ ಸಹಕರ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುಜಾಕುಶಾಲಪ್ಪ, ಮನುಮುತ್ತಪ್ಪ, ಪದ್ಮಶ್ರೀ ಎಂ.ಪಿ.ಗಣೇಶ್, ಪದ್ಮಶ್ರೀ ರಾಣಿ ಮಾಚಯ್ಯ, ಎ.ಬಿ.ಸುಬ್ಬಯ್ಯ, ಪಾಂಡಂಡ ಬೋಪಣ್ಣ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಈ ಕೊಡವ ಕೌಟುಂಬಿಕ ಹಾಕಿ ಉತ್ಸವ ಏಪ್ರಿಲ್ 9 ರವರೆಗೆ ನಾಪೋಕ್ಲುವಿನಲ್ಲಿ ಜರುಗಲಿದೆ 336 ಕೊಡವ ಕುಟುಂಬ ತಂಡಗಳು ಪಾಲ್ಗೊಳ್ಳುತ್ತಿವೆ.