ಮಡಿಕೇರಿ: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ವೈಎಸ್ ಹಾಗೂ ಎಸ್ಎಸ್ಎಫ್ ಸಂಘಟನೆಗಳ ಸಂಯುಕ್ತಶ್ರಯದಲ್ಲಿ ಜ.6 ರಂದು ಕೊಡಗಿನಲ್ಲಿ ಮೆಂಬರ್ ಶಿಪ್ ಡೇ ಕಾರ್ಯಕ್ರಮ ನಡೆಯಲಿದೆ ಎಂದು ಎಸ್ವೈಎಸ್ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಪಿ.ಮೊಯಿದ್ದಿನ್ ತಿಳಿಸಿದರು.
ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಳಿತಿನ ಹಾದಿಯಲ್ಲಿ ನಿಮ್ಮದ್ದೊಂದು ಹೆಜ್ಜೆ ಇರಲಿ” ಎಂಬ ಶೀರ್ಷಿಕೆಯಡಿಯಲ್ಲಿ 47 ವರ್ಷ ಮೇಲ್ಪಟ್ಟವರಿಗೆ ಸದಸ್ಯತ್ವ ನೀಡಿ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ ಎಂದರು.
ಇದೇ ಸಂದರ್ಭ 32 ರಿಂದ 47 ವರ್ಷದೊಳಗಿರುವವರಿಗೆ “ಪರಂಪರೆಯ ಪ್ರತಿನಿಧಿಗಳಾಗೋಣ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಎಸ್.ವೈಎಸ್ ಸದಸ್ಯತನ ನೀಡುತ್ತಿದ್ದು, ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾ ಸಮಿತಿಯು ಸಕ್ರೀಯವಾಗಿ ತೊಡಗಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಎಸ್ಎಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಎಂ.ಎ.ಶರೀಫ್, ಎಸ್ಎಸ್ಎಫ್ ರಾಜ್ಯ ಸದಸ್ಯ ಮಜೀದ್ ಕೊಂಡಗೇರಿ, ಕೆ.ಎಂ.ಜೆ ಕೊಡಗು ಪ್ರಧಾನ ಕಾರ್ಯದರ್ಶಿಯಾದ ಮಹಮ್ಮದ್ ಹಾಜಿ, ಎಸ್ವೈಎಸ್ ಕೋಶಾಧಿಕಾರಿಯಾದ ಪಿ.ಎ.ಅಬ್ದುಲ್ಲ, ಕಾರ್ಯದರ್ಶಿಯಾದ ಎಸ್.ಎಂ.ಹಂಝ ಉಪಸ್ಥಿತರಿದ್ದರು.