ಮಡಿಕೇರಿ: ಚರಿತ್ರಾರ್ಹ ಶ್ರೀ ಓಂಕಾರೇಶ್ವರ ದೇಗುಲದ ಪವಿತ್ರ ಭತ್ತದ ಭೂಮಿಯಲ್ಲಿ ಮಂಗಳವಾರ ನಾಟಿ ಕಾರ್ಯ ನೆರವೇರಿತು. ಭತ್ತದ ಬೆಳೆಯನ್ನು ಪ್ರತಿಬಾರಿ ಪುತ್ತರಿ ನಮ್ಮೆಯಂದು ಕಟಾವು ಮಾಡಿ ಭಕ್ತಾಧಿಗಳಿಗೆ ಕದಿರು ಹಂಚಲಾಗುತ್ತದೆ.
ನಾಟಿಯಲ್ಲಿ ಕೊಡಗು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತ ಶಯನ, ವಿಸರ್ಜಿತ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ದೇವಾಲಯ ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣಪ್ಪ, ಮೂಡಾ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ರೋಟರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್, ನಗರಸಭಾ ಸದಸ್ಯ ಅಪ್ಪಣ್ಣ, ದೇವರಾಜ್, ಕೃಪಾ ದೇವರಾಜ್, ವೀಣಾಕ್ಷಿ, ಪ್ರಕಾಶ್ ಆಚಾರ್ಯ, ಪ್ರಭು ರೈ, ಹರೀಶ್ ಕಿಗ್ಗಾಲು, ಕೆ.ಎಂ. ವೆಂಕಟೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.
ತೆನ್ನೀರ ಮೈನಾ ಅವರಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಕಾವೇರಮ್ಮೆ, ಇಗ್ಗುತಪ್ಪರ ಪ್ರಾರ್ಥನೆ ಬಳಿಕ ನಾಟಿ ಆರಂಭವಾಯಿತು.