ಮಡಿಕೇರಿ: ಕೊಡಗು ಜಿಲ್ಲಾ ವುಶು ಅಸೋಸಿಯೇಷನ್ ಹಾಗೂ ಕರ್ನಾಟಕ ವುಶು ಅಸೋಸಿಯೇಷನ್ ವತಿಯಿಂದ ಮಾದಾಪುರದಲ್ಲಿ 4ನೇ ಜಿಲ್ಲಾ ಮಟ್ಟದ ವುಶು ಚಾಂಪಿಯನ್ ಶಿಪ್ ನಡೆಯಿತು.
ಮಾದಾಪುರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸ್ಪರ್ಧೆಯನ್ನು ಹಿರಿಯರಾದ ಶ್ರೀಧರ್, ಸುಂಟಿಕೊಪ್ಪ ಜೆಸಿಐ ನ ಅಧ್ಯಕ್ಷ ಬಿ.ಆರ್.ಸತೀಶ್ ಕುಮಾರ್ ಉದ್ಘಾಟಿಸಿದರು. ವುಶು ಸಂಸ್ಥೆಯ ಅಧ್ಯಕ್ಷ ಪಿ.ಕೆ.ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳ ಸುಮಾರು 15 ತಂಡಗಳು ಭಾಗವಹಿಸಿದ್ದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ವಸ್ಥ ಸಂಸ್ಥೆಯ ವ್ಯವಸ್ಥಾಪಕ ಮುರುಗೇಶ್ ವಿಜೇತ ಕ್ರೀಡಾಪಟುಗಳಿಗೆ ಪದಕ ವಿತರಿಸಿದರು.