ಮಡಿಕೇರಿ: ಬೀಟೆಮರದ ನಾಟಾ ಕಳುವಿಗೆ ವಿಫಲ ಯತ್ನನಡೆಸಿದ್ದು ಪಿಕ್ ಅಪ್ ಮಗುಚಿದ ಪರಿಣಾಮ ನಾಟಾಗಳನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾದ ಘಟನೆ ಪೊನ್ನಂಪೇಟೆ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ.
ತೀತರಮಾಡ ಸುನೀಲ್ ಎಂಬುವರ ಕಾಫಿತೋಟದಲ್ಲಿದ್ದ ಬೀಟೆ ಮರ ಕಳವಿಗೆ ವಿಫಲ ಯತ್ನ ನಡೆಸಿದ್ದರು. ಪಿಕ್ ಅಪ್ ವಾಹನ (ಕೆ.ಎಲ್-13.ಕೆ.2084) ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ, ಪೊಲೀಸ್ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿ,ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಭೇಟಿ ಮಾಡಿದ್ದಾರೆ.