ಕಾರ್ಕಳ : ಮಡಿಕೇರಿ ಕುಶಾಲನಗರದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತ: ಕುಶಾಲನಗರದವನಾಗಿದ್ದು ಕಳೆದ ಎಂಟು ವರ್ಷಗಳಿಂದ ಕಾರ್ಕಳ ನಗರದ ಬಂಗ್ಲೆಗುಡ್ಡೆಯ 2ನೇ ವಾರ್ಡಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಖಾಸಿಂ ಎಂಬಾತ ಇದೇ ಪ್ರಕರಣದ ಆರೋಪಿಯಾಗಿದ್ದಾನೆ.
ರೆಂಜಾಳದ ಯುವತಿಯೊಬ್ಬಳನ್ನು ವಿವಾಹವಾಗಿ ಬಂಗ್ಲೆಗುಡ್ಡೆಯ ಮನೆಯೊಂದರಲ್ಲಿ ವಾಸವಾಗಿದ್ದನು. ಹಳೆ ವಾಹನವೊಂದನ್ನು ಹೊಂದಿದ್ದ ಈತ ಗುಜುರಿ ವ್ಯಾಪಾರ ಮಾಡುತ್ತಿದ್ದನು. ಸಾರ್ವಜನಿಕರೊಂದಿಗೆ ಸಭ್ಯನಂತೆ ಫೋಸ್ ಕೂಡಾ ನೀಡುತ್ತಿದ್ದ ಖಾಸಿಂ ಕೆಲ ದಿನಗಳಲ್ಲಿ ಕಾರ್ಕಳದಿಂದ ಮಾಯವಾಗುತ್ತಿದ್ದನು.
ದಕ್ಷಿಣ ಕಾಶ್ಮೀರ ಎಂದೇ ಪ್ರಸಿದ್ದಿ ಹೊಂದಿರುವ ಕೊಡಗು ಜಿಲ್ಲೆಯ ಪ್ರಾಕೃತಿಕ ರಮಣೀಯ ಸೌಂದರ್ಯವನ್ನು ಅಸ್ಪಾದಿಸಲು ಬರುವ ಪ್ರವಾಸಿಗರು ಅಸಂಖ್ಯಾತರರು.
ಇದರ ಮಾಹಿತಿಗಳ ಕುರಿತು ಕಲೆಹಾಕುವ ಖಾಸಿಂ ತಂಡವು ರೆಸಾಟ್೯ಗಳ ಮೇಲೆ ಕಣ್ಣು ಹಾಯಿಸುತ್ತಿತ್ತು. ಖಾಸಿಂ ತಂಡ ಪ್ರವಾಸಿಗರ ತಂಡವೊಂದರಿಂದ ಚಿನ್ನಾಭರಣ ಎಗರಿಸಿರುವುದು ಬರೋಬರಿ ರೂ.12 ಲಕ್ಷಕ್ಕೂ ಮಿಕ್ಕಿ. ಪ್ರಕರಣದ ವಿಚಾರಣೆ ನಡೆಸಿದ ಕುಶಾಲನಗರದ ಪೊಲೀಸರು ತನಿಖೆಯ ವಿಸ್ತರಣೆಯನ್ನು ಕಾರ್ಕಳಕ್ಕೂ ವಿಸ್ತರಿಸಿದ್ದರು. ಅದಕ್ಕೆ ಕಾರ್ಕಳ ಪೊಲೀಸರ ಸಹಕಾರವು ಇತ್ತು.
ಆರೋಪಿ ಖಾಸಿಂ ಕಳವುಗೈದು ಮಾರಾಟ ಮಾಡಿದ ಚಿನ್ನಾಭರಣವನ್ನು ಉಡುಪಿಯ ಜ್ಯುವೆಲ್ಲರಿಯೊಂದರಿಂದ ವಶಪಡಿಸಿದ್ದಾರೆಂಬ ಮಾಹಿತಿ ಲಭಿಸಿದೆ. ಆರೋಪಿ ಖಾಸಿಂ ನನ್ನು ಪೊಲೀಸರು ಕುಶಾಲನಗರಕ್ಕೆ ಕರೆದೊಯ್ದು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.