ಮಡಿಕೇರಿ : ರಾಜ್ಯದಲ್ಲಿ ಹಲಾಲ್ ಮಾಂಸ ನಿಷೇಧ ಅಭಿಯಾನ ಆರಂಭಗೊಂಡಿದೆ ಈ ಕುರಿತು ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲಾಲ್ ವಿರುದ್ಧ ಅಭಿಯಾನ ಆರಂಭವಾಗಿದ್ದು, ಇದು ಧಾರ್ಮಿಕ ವಿಚಾರ.ಈ ವಿಚಾರದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ ಯಾರಿಗೆ ಇಷ್ಟ ಇದೆ ಅವರು ಹಲಾಲ್ ಸ್ವೀಕರಿಸುತ್ತಾರೆ ಯಾರಿಗೆ ಇಷ್ಟ ಇಲ್ಲ ಅವರು ಹಲಾಲ್ ಸ್ವೀಕರಿಸಲ್ಲ ಎಂದು ಹೇಳಿದ್ದಾರೆ.
ಇನ್ನು ಹಲಾಲ್ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಯಾವುದೇ ವಿಚಾರವಿಲ್ಲ. ಇದು ಸರ್ಕಾರದ ವ್ಯಾಪ್ತಿಗೂ ಬರುವುದಿಲ್ಲ. ಹಲಾಲ್ ಸ್ವೀಕರಿಸುವುದು, ಬಿಡುವುದು ಜನರ ಇಚ್ಚೆಗೆ ಬಿಟ್ಟಿದ್ದು ಎಂದರು.