News Karnataka Kannada
Thursday, May 02 2024
ಮಡಿಕೇರಿ

ಮೈಸೂರು -ಕುಶಾಲನಗರ ನೂತನ ರಾಷ್ಟ್ರೀಯ ಹೆದ್ದಾರಿ ಅನುಷ್ಠಾನ ಸಂಬಂದ ಪೂರ್ವ ಭಾವಿ ಸಭೆ

Mysore
Photo Credit :

ಮೈಸೂರು ;  ನೂತನ ಮೈಸೂರು-ಕುಶಾಲನಗರ ಹೆದ್ದಾರಿ ವಿಭಾಗದ (NH-275) ಯೋಜನೆ ಕುರಿತಂತೆ ಅನುಷ್ಠಾನಗೊಳಿಸುವ ಸಂಬಂಧ  ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಡಗು ಮೈಸೂರು ಸಂಸದ ಪ್ರತಾಪ ಸಿಂಹ ಅವರ ಅದ್ಯಕ್ಷತೆಯಲ್ಲಿ  ಶನಿವಾರ  ಸಭೆಯು ನಡೆಯಿತು.

3300.45 ಕೋಟಿ ರೂಪಾಯಿಗಳ ವೆಚ್ಚದ ಈ ಯೋಜನೆಗಾಗಿ   ಅರಣ್ಯ ಇಲಾಖೆ ,   ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ , ಸೆಸ್ಕ್‌ , ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳನ್ನು  ಸಭೆಗೆ ಆಹ್ವಾನಿಸಿ  ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ  ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸೃತ ಚರ್ಚೆ ನಡೆಸಲಾಯಿತು.

ಈ ಉದ್ದೇಶಿತ ಯೋಜನೆಗೆ ವಿಸೃತ ಯೋಜನಾ ವರದಿ ಸಿದ್ದ ಪಡಿಸಲಾಗಿದ್ದು ಕಾಮಗಾರಿಯು ಒಟ್ಟು 30 ತಿಂಗಳುಗಳಲ್ಲಿ    ಪೂರ್ಣಗೊಳ್ಳಲಿದೆ. ಈ ನೂತನ ಹೆದ್ದಾರಿಯು  ಶ್ರೀರಂಗಪಟ್ಟಣದ ಅಗ್ರಹಾರ  ಗ್ರಾಮದಿಂದ  ಪ್ರಾರಂಭಗೊಂಡು ಕುಶಾಲನಗರ ಹೊರವಲಯದ ಬಸವನಳ್ಳಿ ಗ್ರಾಮದವರೆಗೆ ಬರಲಿದ್ದು ಈ ಯೋಜನೆಯ ಒಟ್ಟು ಉದ್ದ 92 ಕಿಲೋಮೀಟರ್‌ ಗಳಾಗಿದೆ.  ಈ  ಹೆದ್ದಾರಿಯಲ್ಲಿ  45 ಮೀಟರ್‌ ಗಳಷ್ಟು ಅಗಲದ 4 ಪಥಗಳ  ರಸ್ತೆ  ನಿರ್ಮಾಣಗೊಳ್ಳಲಿದೆ.

ಈ ನೂತನ ಹೆದ್ದಾರಿಗೆ ಭೂಸ್ವಾಧೀನಕ್ಕಾಗಿ ಈಗಾಗಲೇ ಸರ್ವೆ ಕಾರ್ಯ ಪೂರ್ಣಗೊಂಡಿದ್ದು  ಇದರಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ವಿತರಣೆ ಮಾತ್ರ ಬಾಕಿ ಇದೆ. ಈ ಯೋಜನೆಯ ಸಿವಿಲ್‌ ಕಾಮಗಾರಿ ವೆಚ್ಚ ಸುಮಾರು 2300.45 ಕೋಟಿ ರೂಪಾಯಿಗಳಾಗಿದ್ದು ಭೂಸ್ವಾದೀನಕ್ಕೆ 1000 ಕೋಟಿ ರೂಪಾಯಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ.

ಈ ಹೆದ್ದಾರಿಯಲ್ಲಿ  ಕುಶಾಲನಗರ , ಪಿರಿಯಾಪಟ್ಟಣ, ಹುಣಸೂರು ಮತ್ತು ಶ್ರೀರಂಗಪಟ್ಟಣದಲ್ಲಿ ಟೋಲ್‌ ಬರಲಿದೆ. ಈ ಹೆದ್ದಾರಿಯು ಮೈಸೂರಿಗೆ ಸಂಪರ್ಕ ಹೊಂದುವುದಿಲ್ಲ. ಇದು ಬಸವನಳ್ಳಿಯಿಂದ ನೇರವಾಗಿ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇ ಗೆ ಸಂಪರ್ಕ ಕಲ್ಪಿಸಲಿದೆ.

ಒಟ್ಟು ಮೂರು ಪ್ಯಾಕೇಜ್‌ ಗಳಲ್ಲಿ  ಈ ಯೋಜನೆ ಅನುಷ್ಠಾನಗೊಳ್ಳಲಿದ್ದು ಒಟ್ಟು ನಾಲ್ಕು ದೊಡ್ಡ ಸೇತುವೆಗಳು ಒಂದು ಚಿಕ್ಕ ಸೇತುವೆ ನಿರ್ಮಾಣಗೊಳ್ಳಲಿದೆ. ಈ ಹೆದ್ದಾರಿಯಲ್ಲಿ ಕೊಪ್ಪ ಬಳಿ ರೆಸ್ಟ್‌ ಏರಿಯಾ ಕೂಡ ನಿರ್ಮಾಣವಾಗಲಿದ್ದು ಒಟ್ಟು 13.16
ಕಿಲೋಮೀಟರ್‌ ಉದ್ದದ ಸರ್ವೀಸ್‌ ರಸ್ತೆ ಮತ್ತು 21.65 ಕಿಲೋಮೀಟರ್‌ ಉದ್ದದ ಸ್ಲಿಪ್‌ ರಸ್ತೆ ನಿರ್ಮಾಣಗೊಳ್ಳಲಿದೆ.

ಈ ಹೆದ್ದಾರಿಗೆ ಕುಶಾಲನಗರದಲ್ಲಿ  12.32 ಕಿಲೋಮೀಟರ್‌ ಉದ್ದದ ಬೈಪಾಸ್‌ , ಪಿರಿಯಾಪಟ್ಟಣದಲ್ಲಿ 19.92 ಕಿಲೋಮೀಟರ್‌ ಬೈಪಾಸ್‌ , ಹುಣಸೂರು , ಬಿಳಿಕೆರೆಯಲ್ಲಿ ಬೈಪಾಸ್‌ ಮತ್ತು ಇಲವಾಲ ಬಳಿ 4.59 ಕಿಲೋಮೀಟರ್‌ ಉದ್ದದ ಬೈಪಾಸ್‌
ನಿರ್ಮಾಣಗೊಳ್ಳಲಿದೆ.

ಈ ಹೆದ್ದಾರಿಯಲ್ಲಿ ಒಂದು ಫ್ಲೈ ಓವರ್‌ ಕೂಡ ನಿರ್ಮಾಣಗೊಳ್ಳಲಿದೆ.  ಈಗಾಗಲೇ 8506 ಕೋಟಿ ರೂಪಾಯಿಗಳ ವೆಚ್ಚದ  ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು  ಮುಂದಿನ ದಸರಾ ವೇಳೆಗೆ
ಪೂರ್ಣಗೊಳ್ಳಲಿದೆ.

ಅದು ಮುಗಿದ ಕೂಡಲೇ ಈ ಯೋಜನೆ ಅನುಷ್ಠಾನ ಚುರುಕಾಗಲಿದೆ ಎಂದು ಅಧಿಕಾರಿಗಳು ಹೇಳಿದರು. ಈಗ ಮಡಿಕೇರಿ -ಬೆಂಗಳೂರು ನಡುವಿನ ಪ್ರಯಾಣದ ಅವಧಿ 7 ಘಂಟೆಗಳಾಗಿದ್ದು ಈ ನೂತನ ಹೆದ್ದಾರಿ ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿ ಕೇವಲ 4 ಘಂಟೆಗಳಿಗೆ ಇಳಿಕೆ ಆಗಲಿದೆ.

ಈ ಹೆದ್ದಾರಿ ಯಿಂದಾಗಿ ಬೆಂಗಳೂರು- ಮಂಗಳೂರು ನಡುವಿನ ಸಂಪರ್ಕ ಮತ್ತಷ್ಟು ಹೆಚ್ಚಾಗಲಿದ್ದು  ವಾಣಿಜ್ಯ ವಹಿವಾಟು , ಬಂದರು ಮೂಲಕ ಆಮದು ರಫ್ತು ವಹಿವಾಟೂ ಹೆಚ್ಚಳಗೊಳ್ಳಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೂ ಹೆಚ್ಚಿನ
ಅನುಕೂಲ ಆಗುವುದರ ಜತೆಗೇ  ವಾಣಿಜ್ಯ ಚಟುವಟಿಕೆಯೂ ಹೆಚ್ಚಾಗಲಿದೆ.

ವಹಿವಾಟಿನ ಹೆಚ್ಚಳದಿಂದ ಉದ್ಯೋಗಾವಕಾಶವೂ ಹೆಚ್ಚಾಗಲಿದೆ. ಇಂದಿನ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಗೌತಮ್‌ ಬಗಾದಿ , ಶಾಸಕ ಜಿ ಟಿ ದೇವೇ ಗೌಡ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು