ಮಡಿಕೇರಿ: ಕೊಡಗಿನ ಮಳೆ-ಬೆಳೆ ದೇವರೆಂದೇ ಕರೆಯಲಾಗುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಕೊಡಗಿನ ಹುತ್ತರಿ ಹಬ್ಬಕ್ಕೆ ಶುಕ್ರವಾರ ಮುಹೂರ್ತ ನಿಗದಿಪಡಿಸಲಾಯಿತು.
ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಪ್ರಮುಖರ ಸಮ್ಮುಖದಲ್ಲಿ ದೇವಾಲಯದ ಜ್ಯೋತಿಷ್ಯರಾದ ಶಶಿಕುಮಾರ್ ಕೆ.ಅವರು ಹುತ್ತರಿ ಹಬ್ಬದಂದು ಕದಿರು ತೆಗೆಯುವುದಕ್ಕೆ ಮುಹೂರ್ತ ನಿಗದಿಪಡಿಸಿದರು.
ಅದರಂತೆ ನ.20ರ ರಾತ್ರಿ 7.05ರ ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ದೇವಾಲಯದಲ್ಲಿ ನೆರೆ ಕಟ್ಟಿ,8.05ಕ್ಕೆ ಕದಿರು ತೆಗೆಯುವುದಕ್ಕೆ ಹಾಗೂ 9.05ಕ್ಕೆ ಭೋಜನಕ್ಕೆ ಸುಮುಹೂರ್ತ ಎಂದು ತಿಳಿಸಿದರು.
ಬಳಿಕ ಜಿಲ್ಲೆಯಲ್ಲಿ ರಾತ್ರಿ 7.35 ಕ್ಕೆ ನೆರೆ ಕಟ್ಟುವುದು, 8.35ಕ್ಕೆ ಕದಿರು ತೆಗೆಯುವುದು ಹಾಗೂ 9.35ಕ್ಕೆ ಭೋಜನಕ್ಕೆ ಸಕಾಲ ಎಂದು ಮುಹೂರ್ತ ನಿಗದಿಪಡಿಸಲಾಯಿತು.