News Karnataka Kannada
Saturday, April 27 2024
ಹಾಸನ

ಹೊಳೆನರಸೀಪುರ ಘಟಕಕ್ಕೆ ಕೀರ್ತಿ ತಂದ ಚಾಲಕರ ಸೇವೆ ಅಭಿನಂದನೀಯ

The service of the drivers who brought laurels to the Holenarasipura unit is commendable
Photo Credit : News Kannada

ಹೊಳೆನರಸೀಪುರ: ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು, ಅಪಘಾತ ರಹಿತ ಚಾಲನೆಯನ್ನು ಮಾಡುವ ಮೂಲಕ ಕೆ.ಎಸ್.ಆರ್.ಟಿ.ಸಿ.ಗೆ. ಮತ್ತು ಹೊಳೆನರಸೀಪುರ ಘಟಕಕ್ಕೆ ಕೀರ್ತಿ ತಂದ ಚಾಲಕರ ಸೇವೆ ಅಭಿನಂದನೀಯ ಮತ್ತು ಶ್ಲಾಘನೀಯ ಎಂದು ಶಾಸಕ ಹೆಚ್.ಡಿ. ರೇವಣ್ಣನವರು ತಿಳಿಸಿದರು.

ಅವರು ಇಂದು ಹೊಳೆನರಸೀ ಪುರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ,ಹಾಸನ ವಿಭಾಗದ ವತಿಯಿಂದ ಇಂದು ಹೊಳೆನರಸೀ ಪುರ ಬಸ್ ನಿಲ್ದಾಣದ ವಿಸ್ತರಿಸಿದ ಕಟ್ಟಡವನ್ನು ಹಾಗೂ ಬಸ್ ಘಟಕದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.ಹೊಳೆನರಸೀಪುರದ ಬಸ್ ನಿಲ್ದಾಣದ ವಿಸ್ತರಿಸಿದ ಕಟ್ಟಡ ವನ್ನು, ಮತ್ತು ಬಸ್ ಘಟಕದ ವಸತಿ ಗೃಹ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸುಮಾರು ನಾಲ್ಕು ಕೋಟಿ ಐವತ್ತು ಲಕ್ಷ ರೂಪಾಯಿಗಳಿಗೂ ಹೆಚ್ಚಿನ ವೆಚ್ಚವನ್ನು ಮಾಡಲಾಗುತ್ತಿದ್ದು ಸಾರ್ವ ಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಪ್ರಸ್ತುತ ಹೊಳೆನರಸೀಪುರ ಬಸ್ ನಿಲ್ದಾಣದಲ್ಲಿ, ಪ್ರಯಾಣಿಕರ ನಿರೀಕ್ಷಣಾ ಆವರಣ, ಆಸನ ಮತ್ತು ಶೌಚಾಲಯ ವ್ಯವಸ್ಥೆ, ವಿಶೇಷ ಚೇತನರ ಶೌಚಾಲಯ, ವಾಣಿಜ್ಯ ಮಳಿಗೆಗಳು ಮತ್ತು ಸಂಚಾರ ನಿಯಂತ್ರಕರ ಕೊಠಡಿ,ಉಪಹಾರ ಗೃಹ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ, ಮತ್ತು ತಾಲ್ಲೂಕಿನಿಂದ ಅವಶ್ಯಕತೆ ಇರುವ ಹಳ್ಳಿಗಳಿಗೆ ಮತ್ತಷ್ಟು ಬಸ್ ಸಂಚಾರದ ಮಾರ್ಗವನ್ನು ನಿಗದಿಪಡಿಸಲಾಗಿತ್ತದೆ ಎಂದು ತಿಳಿಸಿದರು.

ಕೆ.ಎಸ್. ಆರ್.ಟಿ.ಸಿ. ವತಿಯಿಂದ ವಿದ್ಯಾರ್ಥಿ ಗಳಿಗೆ ಉಚಿತ ಬಸ್ ಪಾಸ್.ವಿಶೇಷ ಚೇತನರಿಗೆ ಬಸ್ ಪಾಸ್. ಹಿರಿಯ ನಾಗರೀಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್, ಮತ್ತು ಉದ್ಯೋಗಿಗಳಿಗೆ ಮಾಸಿಕ ಬಸ್ ಪಾಸ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸ ಲಾಗಿದೆ ಎಂದು ಕೆ.ಎಸ್.ಆರ್. ಟಿ.ಸಿ.ಸಿಬ್ಬಂದಿಗಳ ಮತ್ತು ನೌಕರ ವರ್ಗದ ಸೇವೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇಂದು ೨ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವ, ವಾಲ್ಮೀಕಿ ಜನಾಂಗದ ಸಮುದಾಯ ಭವನಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ವಿಭಾಗದ ಆಡಳಿತ ಮತ್ತು ಸಿಬ್ಬಂದಿ ವರ್ಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎಸ್.ಅರುಣ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ವಿಭಾಗವು ೧೯೬೧ ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು. ೬೩ ನೇ ವರ್ಷದತ್ತ ಮುನ್ನುಗ್ಗುತ್ತಿದೆ. ಪ್ರಸ್ತುತ ಹಾಸನ – ೧, ಹಾಸನ – ೨, ಚನ್ನರಾಯಪಟ್ಟಣ, ಅರಕಲಗೂಡು, ಹೊಳೆನರಸೀಪುರ, ರಾಮ ನಾಥಪುರದಲ್ಲಿ ೬ ಘಟಕಗಳನ್ನು ಹೊಂದಿದ್ದು, ೧೭ ಬಸ್ ನಿಲ್ದಾಣ ಗಳಿದ್ದು, ೨೫೫೩ ಸಿಬ್ಬಂದಿ ಗಳೊಂದಿಗೆ ೫೪೧ ಅನುಸೂಚಿಗಳನ್ನು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ನಿತ್ಯ ೧.೮೭ ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಹಾಸನ ಜಿಲ್ಲೆಯು ಸಂಪೂರ್ಣ ವಾಗಿ ರಾಷ್ಟ್ರೀಕರಣಗೊಂಡಿದ್ದು, ಜಿಲ್ಲೆಯಲ್ಲಿ ೧೪೭೪ ಹಳ್ಳಿಗಳಿದ್ದು, ಅದರಲ್ಲಿ ಎಲ್ಲಾ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಾಗಿದೆ.

ಸಾಮಾನ್ಯ ಅನುಸೂಚಿಗಳು ೨೦೪, ವೇಗದೂತ ಅನುಸೂಚಿಗಳು ೩೦೩, ನಗರ ಸಾರಿಗೆ ೩೦, ರಾಜ ಹಂಸ ೪ ಬಸ್ ಇದೆ. ಹೊಳೆನರಸೀ ಪುರ ಬಸ್ ಘಟಕವು ೧೯೯೮ ರಲ್ಲಿ ಪ್ರಾರಂಭವಾಗಿದ್ದು, ಸದರಿ ವ್ಯಾಪ್ತಿಯಲ್ಲಿ ೨ ನಿಲ್ದಾಣಗಳಿದೆ, ೯೩ ಅನುಸೂಚಿಗಳನ್ನು ೯೫ ವಾಹನ ಗಳಿಂದ ನಿರ್ವಹಣೆ ಮಾಡಲಾ ಗುತ್ತಿದ್ದು, ೪೯ ವೇಗದೂತ,೪೪ ಸಾಮಾನ್ಯ ಅನುಸೂಚಿಗಳು ಕಾರ್ಯನಿರ್ವಾಹಿಸುತ್ತಿದೆ, ತಾಲ್ಲೂಕಿನ ೨೧೧ ಹಳ್ಳಿಗಳಿಗೂ ಬಸ್ ಸಂಚಾರ ವ್ಯವಸ್ಥೆಯನ್ನು ಒದಗಿಸಲಾಗಿದೆ, ಪ್ರತಿ ನಿತ್ಯ ೩೪೩೬೩ ಕಿಲೊಮೀಟರ್ ಕಾರ್ಯಾಚರಣೆ ಮಾಡುತ್ತಿದ್ದು, ನಿತ್ಯವೂ ೨೨.೦೦೦ ಪ್ರಯಾಣಿಕರು ಹಾಗೂ ೬೦೦೦ ವಿದ್ಯಾರ್ಥಿಗಳು ಸಾರಿಗೆ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ಸದರಿ ಘಟಕದಿಂದ ಅಂತರ ಜಿಲ್ಲಾ ಮತ್ತು ಅಂತರ ರಾಜ್ಯಕ್ಕೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ , ಯೋಧರಿಗೆ ಉಚಿತ ಬಸ್ ಪಾಸ್ ಮತ್ತು ಇನ್ನಿತರರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವ ಮೂಲಕ ಕೆ.ಎಸ್.ಆರ್.ಟಿ.ಸಿ. ಸಮಾಜಮುಖಿಯಾಗಿ ಸೇವೆಯನ್ನು ಸಲ್ಲಿಸಿ ಜನ ಮೆಚ್ಚುಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಇಂದು ಶಾಸಕರು ಕೆ.ಎಸ್.ಆರ್.ಟಿ.ಸಿ. ಹೊಳೆನರಸೀಪುರ ಘಟಕದ ಅಪಘಾತ ರಹಿತ ಚಾಲನೆ ಮಾಡಿದ ೨೪ ಚಾಲಕರಿಗೆ ಬೆಳ್ಳಿ ಪದಕವನ್ನು ವಿತರಣೆ ಮಾಡಿದರು. ಕೆ.ಎಸ್. ಆರ್.ಟಿ.ಸಿ.ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು.ಪುರಸಭೆ ಅಧ್ಯಕ್ಷರಾದ ಎನ್.ಜ್ಯೋತಿ ಮಂಜುನಾಥ್, ಉಪಾಧ್ಯಕ್ಷರಾದ ಜಿ.ತ್ರಿಲೋಚನಾ ಸೋಮೇಶ್. ಪುರಸಭೆ ಸದಸ್ಯರಾದ ಕೆ.ಶ್ರೀಧರ್ ( ಎ.ವಿ.ಎಸ್.) ಮತ್ತು ಇನ್ನಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು