ಹಳೇಬೀಡು: ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೂಸಿಯಂ ಮುಂಭಾಗದ ಫಲಕದಲ್ಲಿ ಕನ್ನಡದಲ್ಲಿ ಮಾಹಿತಿ ಇಲ್ಲದಿರುವ ಬಗ್ಗೆ ಪ್ರವಾಸಿಗರು ಸೌಜನ್ಯವಾಗಿ ಕೇಳಿದರು ಮೂಸಿಯಂ ನಿರ್ವಹಣೆ ನೋಡಿಕೊಳ್ಳವ ಸಹಾಯ ಪುರಾತತ್ವ ಅಧೀಕ್ಷಕ ಅನಿಲ್ ಕುಮಾರ್ ಉಡಾಫೆಯಿಂದ ವರ್ತಿಸಿರುವುದಲ್ಲದೆ ಇಂಗ್ಲಿಷ್ ಭಾಷೆಯಲ್ಲಿ ನಿಂದನೆ ಮಾಡಿ ಅವಮಾನ ಮಾಡಿದ್ದಾರೆ ನಮಗೆ ಬೇಕಾದ ಭಾಷೆಯಲ್ಲಿ ಹಾಕಿಕೊಳ್ಳುತ್ತೇವೆ ಇದನ್ನೆಲ್ಲ ಕೇಳಲು ನೀವು ಯಾರು ಎಂದು ನಿಂದಿಸಿ ಅವಮಾನಸಿದ್ದಾರೆ.
ಈ ಅಧಿಕಾರಿಯ ವಿರುದ್ಧ ಹಾಗೂ ಸಂಬಂಧಪಟ್ಟಿ ಇಲಾಖೆಯಿಂದ ಸಾಹಿತ್ಯ ಪರಿಷತ್ತು ಖಂಡಿಸುತ್ತಿದ್ದು ಕೂಡಲೇ ಮ್ಯೂಸಿಯಂ ಮುಂಭಾಗದ ಮಾಹಿತಿ ಫಲಕದಲ್ಲಿ ಮೊದಲು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಹಾಗೂ ಕನ್ನಡ ಭಾಷೆ ಬಗ್ಗೆ ಕೇಳಿದ ಪ್ರವಾಸಿಗರಿಗೆ ನಿಂದನೆ ಮಾಡಿರುವ ಅಧಿಕಾರಿಯ ವಿರುದ್ಧ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.