ಹಾಸನ: ಸಕಲೇಶಪುರದ ಉದೇವಾರ ಗ್ರಾಮದಲ್ಲಿ ಕಾಡಾನೆಯೊಂದು ತೀವ್ರ ಗಾಯಗೊಂಡಿದ್ದು ಸೊಂಡಿಲು, ಮುಖದ ಭಾಗಕ್ಕೆ ಗಾಯವಾಗಿ ರಕ್ತ ಸುರಿಯುತ್ತಿರುವ ಸ್ಥಿತಿಯಲ್ಲಿ ಈ ಕಾಡಾನೆ ನಾಡಿಗೆ ಬಂದಿದೆ ಎನ್ನಲಾಗಿದೆ.
ಕೆಲವೊಮ್ಮೆ ಕಾಲು ಎತ್ತಿಡಲಿಕ್ಕೂ ಕಷ್ಟಪಡುವಂತೆ ಕಾಣುತ್ತಿದ್ದ ಆನೆಯ ನಡಿಗೆ ಮರುಕ ಹುಟ್ಟಿಸುವಂತಿತ್ತು. ಸಾಮಾನ್ಯವಾಗಿ ಆನೆ ಕಂಡರೆ ಮಾರು ದೂರ ಓಡುವ ಜನರ ಈ ಆನೆಯ ಮುಂದೆಯೇ ಪರೇಡ್ ಮಾಡಿದರು ಮತ್ತು ವಿಡಿಯೊಗಳನ್ನು ತೆಗೆದರು. ಜತೆಗೆ ಕಾಡಾನೆ ಸ್ಥಿತಿಗೆ ಮರುಗಿದರು.
ಘಟನೆ ತಿಳಿಯುತ್ತಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ದೌಡಾಯಿಸಿದ್ದಾರೆ. ಇನ್ನು ಅದನ್ನು ಹಿಡಿದು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಆನೆ ಯಾವುದೋ ಕಾಡಾನೆ ಜತೆ ಕಾದಾಟವಾಡಿವಾಡಿ ಗಾಯಗೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಗಾಯಗೊಂಡಿರುವ ಕಾಡಾನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆ ನೀಡುತಿದ್ದು ಈ ಕುರಿತು ವಾಹನದ ಮೂಲಕ ಅನೌನ್ಸ್ ಮಾಡಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುತಿದ್ದಾರೆ. ಸಾಮಾನ್ಯವಾಗಿ ಕಾಡಾನೆಗಳು ಮನುಷ್ಯರನ್ನು ಕಂಡರೆ ಧಾಳಿ ಮಾಡುತ್ತವೆ. ಆದರೆ ಈ ಆನೆ ಸಾಧುವಿನಂತೆ ವರ್ತಿಸುತ್ತಿರುವುದು ಆಶ್ಚರ್ಯ ತಂದಿದೆ.