ಬೇಲೂರು: ಏ.೪ ರಂದು ಜರುಗಲಿ ರುವ ಜಗತ್ಪ್ರಸಿದ್ಧ ಶ್ರೀ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ವೇಳೆ ಕುರಾನ್ ಪಠಣ ನಿಷೇಧಿಸುವಂತೆ ಒತ್ತಾಯಿಸಿ ಇಂದು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು.
ಏ.೩ ರೊಳಗೆ ಕುರಾನ್ ಪಠಣ ನಿಷೇಧಿಸುವಂತೆ ಹಿಂದೂಪರ ಸಂಘ ಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಕಳೆದ ವರ್ಷ ಧರ್ಮ ದಂಗಲ್ ವಿವಾ ದದಿಂದ ಶ್ರೀ ಚನ್ನಕೇಶವಸ್ವಾಮಿ ರಥೋ ತ್ಸವಕ್ಕೆ ಹಲವು ಅಡಚಣೆಗಳು ಎದು ರಾಗಿದ್ದವು. ಈ ಭಾರಿ ಏ.೪ ರಿಂದ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಇದಕ್ಕೂ ಮುನ್ನವೇ ಮತ್ತೊಂದು ವಿವಾ ದ ಭುಗಿಲೆದ್ದಿದೆ. ಗಳಿಗೆತೇರು ಎಳೆಯುವ ಮುನ್ನಾ ಬೇಲೂರು ತಾಲ್ಲೂಕಿನ ದೊಡ್ಡ ಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಕುರಾನ್ ಪಠಿಸುತ್ತಾರೆ. ಆನಂತರ ತೇರನ್ನು ಎಳೆಯಲಾಗುತ್ತದೆ. ಆದರೆ ಕುರಾನ್ ಪಠಣೆಗೆ ಹಿಂದೂಪರ ಸಂಘ ಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಪಟ್ಟಣದ ಬಸ ವೇಶ್ವರ ವೃತ್ತದಿಂದ ಶ್ರೀ ಚನ್ನಕೇಶವ ದೇ ವಾಲಯದವರೆಗೆ ಪ್ರತಿಭಟನಾ ಮೆರವ ಣಿಗೆ ಸಾಗುತ್ತಿತ್ತು. ಈ ವೇಳೆ ಸಾರಿಗೆ ಬಸ್ ನಿಲ್ದಾಣ ಸಮೀ ಪ ಬೈಕ್ನಲ್ಲಿ ಬಂದ ಮುಸ್ಲಿಂ ಯುವಕ ನೋರ್ವ ಪ್ರತಿಭಟನಾ ಕಾರರ ಎದುರು ಕುರಾನ್ ಜಿಂದಾಬಾದ್ ಎಂದು ಘೋ ಷಣೆ ಕೂಗಿದ್ದಾನೆ. ಈ ವೇಳೆ ಪ್ರತಿಭಟನಾಕಾರರು ಹಾಗೂ ಯುವಕನ ನಡುವೆ ಮಾತಿನ ಚಕಮಕಿ ನಡೆದು ಪರಸ್ವರ ತಳ್ಳಾಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿತ್ತು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾ ಕಾರರನ್ನು ಚದರಿ ಸಿದರು. ನಂತರ ಯುವಕನನ್ನು ಬಂಧಿಸಿ ಕರೆದೊಯ್ದರು.
ಇದರಿಂದ ಆಕ್ರೋಶ ಗೊಂಡ ಹಿಂದೂಪರ ಸಂಘಟನೆಗಳ ಕಾರ್ಯ ಕರ್ತರು ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸುಮಾರು ಅರ್ಧಗಂಟೆಗು ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಸ್ಥಳಕ್ಕೆ ತಹಸೀಲ್ದಾರ್ ಆಗಮಿಸು ವಂತೆ ಪಟ್ಟು ಹಿಡಿದರು. ಪ್ರತಿಭಟನಾಕಾ ರರ ಒತ್ತಾ ಯದ ಮಣಿದ ತಹಸೀಲ್ದಾರ್ ಮಮತ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾ ರರ ಬೇಡಿಕೆಗಳನ್ನು ಆಲಿಸಿದರು. ಕೂಡಲೇ ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳಿಗೆ ತಿಳುಸುವುದಾಗಿ ಹೇಳಿದರು. ನಂತರ ಶ್ರೀ ಚನ್ನಕೇಶವ ದೇವಾಲ ಯದವರೆಗೂ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿ ಬಹಿರಂಗ ಸಭೆ ನಡೆಸಿದರು.
ಏ.೩ ರೊಳಗೆ ಕುರಾನ್ ಪಠಣ ನಿಷೇಧಿಸಿಬೇಕು ಇಲ್ಲವಾದಲ್ಲಿ ಉಗ್ರಹೋರಾಟ ನಡೆಸುವುದರ ಜೊತೆಗೆ ಕುರಾನ್ ಪಠಣವನ್ನು ತಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕುರಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ವರ್ಷ ಮುಸ್ಲಿಂ ವ್ಯಾಪಾರಸ್ಥರಿಗೆ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ನಿಷೇಧ ಹೇರುವಂತೆ ಹೋರಾಟ ನಡೆದಿತ್ತು. ಕುರಾನ್ ಪಠಣ ನಿಷೇಧಿಸಬೇಕೆಂದು ಹಿಂದೂಪರ ಸಂಘ ಟನೆಗಳ ಕಾರ್ಯ ಕರ್ತರು ಹೋರಾಟ ಆರಂಭಿಸಿದ್ದಾರೆ ಇದು ಮುಂದೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಏ. ೪ ರ ತನಕ ಕಾದುನೋಡಬೇಕಿದೆ.
ಶ್ರೀ ಚನ್ನಕೇಶವ ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣ ವಿರೋಧಿಸಿ ಬೇಲೂರಿನಲ್ಲಿ ಮೆರವಣಿಗೆ ಮಾಡುತ್ತಿದ್ದ ವೇಳೆ ಸಾಕಿಬ್ ಪಾಷಾ ಎಂಬ ವ್ಯಕ್ತಿ ಘೋಷಣೆಗಳನ್ನು ಹೋಗಿದ್ದು ತಕ್ಷಣ ಪೊಲೀಸರು ಆತನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಸದ್ಯ ಪರಿಸ್ಥಿತಿ ಶಾಂತಿಯುತವಾಗಿದ್ದು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ.
-ಹರಿರಾಂ ಶಂಕರ್,