ಹಾಸನ: ಮೈಸೂರಿನಲ್ಲಿ ಸೆರೆ ಹಿಡಿದ ಚಿರತೆಯನ್ನು ಬಿಸಲೆ ಘಾಟ್ ವ್ಯಾಪ್ತಿಯಲ್ಲಿ ಬಿಡಲು ಬೋನಿನಲ್ಲಿ ತಂದಿದ್ದ ಚಿರತೆಯ ವಾಹನವನ್ನು ತಡೆದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಕಲೇಶಪುರ ತಾಲ್ಲೂಕಿನ ಬಿಸಲೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಕಡೆಗೆ ಜನರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು ಚಿರತೆ ಯನ್ನು ವಾಪಸ್ ತೆಗೆದುಕೊಂಡು ಹೋದರು.
ಅರಣ್ಯ ಇಲಾಖೆ ಸಿಬ್ಬಂದಿ ಗಳು ಜನರ ಮೇಲೆ ಅಟ್ಯಾಕ್ ಮಾಡುವ ಒಂದೂವರೆ ವರ್ಷದ ಹೆಣ್ಣು ಚಿರತೆಯನ್ನು ಮೈಸೂರಿನಲ್ಲಿ ಸೆರೆ ಹಿಡಿದಿದ್ದು, ಅದನ್ನು ಮತ್ತೆ ಅರಣ್ಯಕ್ಕೆ ಬಿಡುವ ಸಲುವಾಗಿ ಸಕಲೇಶಪುರ ತಾಲ್ಲೂಕಿನ, ಬಿಸಲೆ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಬಿಡಲು ಮುಂದಾದರು. ಇದಕ್ಕೆ ಚಿರತೆಯನ್ನು ಬೋನಿನಲ್ಲಿ ಹಾಕಿ ಕೊಂಡು ಬಿಡಲು ಯತ್ನಿಸಿದರು.
ಈ ಬಗ್ಗೆ ವಿಷಯ ಗೊತ್ತಾಗಿ ಸ್ಥಳೀಯರು ರಾತ್ರೋ ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿ ಗಳೊಂದಿಗೆ ವಾಗ್ವಾದಕ್ಕಿಳಿದರು. ಯಾವುದೇ ಕಾರಣಕ್ಕೂ ಚಿರತೆಯನ್ನು ಇಲ್ಲಿ ಬಿಡಕೂಡದು ಎಂದು ಪಟ್ಟು ಹಿಡಿದರು.
ಜನರ ಮೇಲೆ ಅಟ್ಯಾಕ್ ಮಾಡುವ ಚಿರತೆ ಸೆರೆ ಹಿಡಿದು ತಂದು ಕಾಡಂಚಿನ ಗ್ರಾಮದಲ್ಲಿ ಬಿಡುತ್ತಿರುವುದು ಸರಿಯಲ್ಲ. ಈ ಹಿಂದೆ ಕೂಡ ಬೇರೆಡೆ ಸೆರೆಯಾದ ಚಿರತೆಯನ್ನು ತಂದಚು ಇದೇ ವ್ಯಾಪ್ತಿಯಲ್ಲಿ ಬಿಡಲಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಜನ ವಸತಿ ಪ್ರದೇಶದಲ್ಲಿ ಸೆರೆಯಾದ ಚಿರತೆಗಳು ಮರಳಿ ಕಾಡು ಸೇರಲ್ಲ . ಜನ ಜಾನುವಾ ರುಗಳ ಮೇಲೆ ದಾಳಿ ಮಾಡಿ ಜೀವ ಭಯ ಸೃಷ್ಟಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿ ಸಿದ ಜನರು, ಕೂಡಲೆ ಬಿಸಿಲೆ ಭಾಗದಲ್ಲಿ ಕಾಣಿಸಿಕೊಳ್ತಿ ರುವ ಚಿರತೆಗನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿದರು.
ಅಂತೂ ಜನರ ಆಕ್ರೋಶಕ್ಕೆ ಗುರಿಯಾದ ಅರಣ್ಯ ಇಲಾಖೆ ಅದಿಕಾರಿಗಳು ರಾತ್ರೋ ರಾತ್ರಿ ಚಿರತೆ ಬಿಡಲು ಮಾಡುತ್ತಿದ್ದ ಯತ್ನಕ್ಕೆ ಫಲ ಸಿಗದೆ ಹಿಂತಿರು ಗಬೇಕಾಯಿತು.