ಹಾಸನ : ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಕಗ್ಗಂಟು ಮುಂದುವರೆದಿರುವಂತೆ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಿ.ಫಾರಂ ತಾವೇ ತರುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ನಗರದ ಕುವೆಂಪು ಬಡಾವ ಣೆಯ ಮಾಜಿ ಶಾಸಕ ಬಿ.ವಿ.ಕರೀ ಗೌಡ ಅವರ ನಿವಾಸದಲ್ಲಿ ನಡೆದ ಆಪ್ತ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ರೇವಣ್ಣ, ಯಾವುದೇ ಕಾರಣಕ್ಕೂ ಸ್ವರೂಪ್ ಅವರಿಗೆ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರಲ್ಲದೆ. ನಾನಾಗಲಿ, ಅಥವಾ ಭವಾನಿ ರೇವಣ್ಣ ಅವರಾಗಲಿ ಅಥವಾ ಮತ್ಯಾರಿಗಾದರೂ ಪಕ್ಷದ ಬಿ ಫಾರಂ ನಾನೇ ತರುತ್ತೇನೆ. ಎಲ್ಲರೂ ಸಿದ್ದರಾಗಿರೋಣ ಎಂದು ಹೇಳಿದ್ದಾರೆ.
ಈ ನಡುವೆ ಪಕ್ಷೇತರವಾಗಿ ಸ್ಪರ್ಧಿಸುವ ವಿಚಾರ ಪ್ರಸ್ತಾಪವಾ ಗುತ್ತಲೇ ಸಭೆಯಲ್ಲಿದ್ದ ಮುಖಂಡರು ಯಾವುದೇ ಕಾರಣಕ್ಕೂ ಅಂತಹ ತಪ್ಪು ನಿರ್ಧಾರ ಮಾಡಬಾರದಾಗಿ ಹಲವರು ರೇವಣ್ಣ ಅವರಿಗೆ ಸಲಹೆ ನೀಡಿದರು.
ತಮ್ಮದೇ ಪಕ್ಷವನ್ನಿಟ್ಟುಕೊಂಡು ಪಕ್ಷೇತರರಾಗಿ ಸ್ಪರ್ಧಿಸು ವುದರಿಂದ ಸಾರ್ವಜನಿಕವಾಗಿ ಕೆಟ್ಟ ಸಂದೇಶ ಹೋಗಲಿದ್ದು ಅದಕ್ಕೆ ಅವಕಾಶ ನೀಡದಂತೆ ಸಭೆಯಲ್ಲಿದ್ದ ಆಪ್ತರು ತಿಳಿಸಿದ್ದಾರೆ. ಇದಕ್ಕೆ ಸಮ್ಮತಿಸಿದ ರೇವಣ್ಣ ಅಂತಹ ಯಾವುದೇ ಸಂದರ್ಭ ಬರುವುದಿಲ್ಲ. ಹಾಸನದ ಟಿಕೆಟ್ ಬಿ. ಫಾರಂ ತಾವೇ ತರುವುದಾಗಿ ತಿಳಿಸಿದ್ದಾರೆ.
ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಊಟ…!
ನಗರದ ಕನ್ವೆನ್ಷನ್ ಹಾಲ್ನಲ್ಲಿ ಮಾಜಿ ಸಚಿವ ರೇವಣ್ಣ ಅವರ ನೇತೃತ್ವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಭಾನುವಾರ ರೇವಣ್ಣ ಇಫ್ತಿಯಾರ್ ಕೂಟ ನಡೆಸಿ ಗಮನ ಸೆಳೆದರು.
ಮನೆ ಮನೆ ಭೇಟಿ ನೀಡಿದ ಪ್ರಜ್ವಲ್ ರೇವಣ್ಣ
ಇತ್ತ ಟಿಕೆಟ್ ಪ್ರಹಸನ ನಡೆಯುತ್ತಿರುವ ನಡುವೆಯೂ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ, ಮನೆ -ಮನೆ ಭೇಟಿ ಆರಂಭಿಸಿದ್ದಾರೆ.