ಅರಕಲಗೂಡು: ಪಟ್ಟಣದ ಅನಕೃ ಸರ್ಕಲ್ ಬಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾಳೇ ಗೌಡ ಮತ್ತು ತಂಡ ಹೆಲ್ಮೆಟ್ ಹಾಕದೆ ಇರುವ ಬೈಕ್ ಸವಾರರನ್ನು ತಡೆದು ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದರು.
ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡುತ್ತಿದ ಬೈಕ್ ಸವಾರರು ಬೈಕ್ ನಿಲ್ಲಿಸಿ ಹೊಸ ಹೆಲ್ಮೆಟ್ ಖರೀದಿ ಮಾಡಿ ಹಾಕಿಸಿ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.
ಬೈಕ್ ಸವಾರ ಸಿದ್ದೇಶ್ ಮಾತನಾಡಿ ನಾವು ಹೆಲ್ಮೆಟ್ ಧರಿಸಿ ಬೈಕ್ ಪ್ರಯಾಣ ಮಾಡಿದರೆ ನಮ್ಮ ಜೀವಾ ಉಳಿಯುತ್ತೆ ಎಷ್ಟೋ ಜನರು ಹೆಲ್ಮೆಟ್ ಹಾಕದೆ ಓಡಾಡುತ್ತಾರೆ ಸಾರ್ವಜನಿಕರಾದ ನಾವುಗಳು ಪೊಲೀಸ್ ಕೆಲಸಕ್ಕೆ ಕೈ ಜೋಡಿಸಬೇಕು. ಪೊಲೀಸ್ ನಮ್ಮ ಜೀವಾ ರಕ್ಷಣೆಗೆ ಮತ್ತು ಅಪಘಾತ ಸಂಭವಿಸಿದ್ದಾಗ ತಲೆಗೆ ಪೆಟ್ಟು ಬೀಳದಿರಲಿ ಎಂದು ಹೆಲ್ಮೆಟ್ ಧರಿಸಿ ದ್ವಿಚಕ್ರ ಓಡಿಸಿ ಎಂದು ಹೇಳುತ್ತಾರೆ ಆದರಲ್ಲೂ ಮಳೆಯನ್ನು ಲೆಕ್ಕಿಸದೆ ದ್ವಿಚಕ್ರ ಚಾಲಕರು ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಿ ಎಂದು ಜಾಗೃತಿ ಮೂಡಿಸಿತ್ತಿರುವ ಪೊಲೀಸರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.