ಹಾಸನ: ಜಿಲ್ಲೆಯಲ್ಲಿ ಮಲೆನಾಡ ಭಾಗದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು ಭಾರಿ ಮಳೆ ಗಾಳಿಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ನಿರಂತರ ಮಳೆಯ ಕಾರಣ ಬಹುತೇಕ ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಕಲೇಶಪುರ ತಾಲೂಕಿನ ಕಲ್ಗಣೆ ಗ್ರಾಮದಲ್ಲಿ ಗಾಳಿಯ ಕಾರಣ ರಸ್ತೆ ಬದಿಗೆ ವಿದ್ಯುತ್ ಕಂಬ ಬಿದ್ದಿದ್ದು ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿದ್ದು ಭತ್ತ ನಾಟಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆಯಾದರೂ, ಭಾರಿ ಗಾಳಿಯ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹೆಚ್ಚಿದ “ಹೇಮಾವತಿ ” ಒಳಹರಿವು:
ಸಕಲೇಶಪುರ ಚಿಕ್ಕಮಗಳೂರು ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗೊರೂರಿನ ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ ಕಂಡಿದೆ. ೬,೭೫೨ ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದ್ದು ಅಡಿಗಳು ತಲುಪಿದೆ ಜಲಾಶ ಯದ ಗರಿಷ್ಠ ಮಟ್ಟ ೨೯೨೨ ಇದ್ದು, ಇಂದು ೨೮೯೫.೩೦ ಕ್ಯೂಸೆಕ್ ತಲುಪಿದೆ. ಹಾಗೂ ೧೨.೬೪ ಟಿಎಂಸಿ ನೀರಿನ ಸಂಗ್ರಹ ಕಂಡುಬಂದಿದೆ. ೨೦೦ ಕ್ಯೂಸೆಕ್ ನೀರನ್ನು ನದಿಗೆ ನೀರನ್ನು ಹರಿಬಿಡಲಾಗುತ್ತಿದೆ.