ಹಾಸನ: ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ ಅವರಿಗೆ ಹಾಕಿರುವ ಸವಾಲಿಗೆ ನಾನು ಈಗಲೂ ಬದ್ಧವಾಗಿದ್ದು,? ಒಬ್ಬ ಸಾಮಾನ್ಯ ಶಾಸಕನ ಸವಾಲು ಸ್ವೀಕರಿಸಲು ಅವರಿಗೆ ೧೮ ತಿಂಗಳು ಬೇಕಾಯಿತು ಎಂದಾದರೆ ನನ್ನ ಬಗ್ಗೆ ಎಷ್ಟು ಸರ್ವೇ ನಡೆಸಿ ಎಷ್ಟು ದೇವಾಲಯ ಸುತ್ತಿದ್ದಾರೆ ಎಂಬುದನ್ನು ಯೋಚಿಸಬೇಕಿದೆ ಎಂದು ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ಹಾಸನ ಕ್ಷೇತ್ರಕ್ಕೆ ಮಾಜಿ ಸಚಿವ ರೇವಣ್ಣ ಸ್ಪರ್ಧಿಸಿದರೆ ೫೦ ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದಾಗಿ ನೀಡಿದ ಹೇಳಿಕೆಗೆ ತಾನು ಬದ್ಧನಾಗಿದ್ದೇನೆ, ಆದರೆ ಅವರು ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿಲ್ಲ. ಪಕ್ಷ ಸೂಚಿಸಿದರೆ ದೆಹಲಿಯಲ್ಲಿ ಬೇಕಾದರೂ ನಿಲ್ಲುತ್ತೇನೆ ಎಂದು ಹೇಳಿಕೆ ನೀಡಿರುವ ರೇವಣ್ಣ ಅವರಿಗೆ ಹಾಸನ ಇರುವುದು ಕರ್ನಾಟಕ ರಾಜ್ಯದಲ್ಲಿ ಎಂಬುದನ್ನು ತಿಳಿಸುವ ಅಗತ್ಯ ಇದೆ ಎಂದರು.
ರೇವಣ್ಣ ಅವರಿಗೆ ಒಂದೆಡೆ ಕುಟುಂಬದಲ್ಲಿ, ಇನ್ನೊಂದೆಡೆ ರಾಜಕೀಯದಲ್ಲಿ ಒತ್ತಡ ಹೆಚ್ಚಿದೆ. ಈ ಒತ್ತಡಗಳ ನಡುವೆ ಅವರ ಪರಿಸ್ಥಿತಿ ಹೇಳತೀರದು ಎಂದು ವ್ಯಂಗ್ಯ ವಾಡಿದರು. ಈಗಾಗಲೇ ಕ್ಷೇತ್ರದ ಕೆಲ ಭಾಗದಲ್ಲಿ ಹಾಸನ ಕ್ಷೇತ್ರದಲ್ಲಿ ಪ್ರೀತಂ ಗೌಡ ವಿರುದ್ದ ಸ್ಪರ್ಧಿಸಿ ಸೋಲು ಅನುಭವಿಸಲು ಇಷ್ಟೊಂದು ಸ್ಪರ್ಧೆ ಇದೆಯೇ ಎಂದು ಜನರೇ ಮಾತನಾಡುತ್ತಿದ್ದಾರೆ. ಯಾರು ಅಭಿವೃದ್ಧಿ ನಡೆಸುತ್ತಾರೋ ಅವರ ಪರ ಜನರು ಇರುತ್ತಾರೆ. ಈ ವಿಚಾರದಲ್ಲಿ ನಾನು ಆತಂಕ ಪಡುವ ಅಗತ್ಯವಿಲ್ಲ ಎಂದರು.
ರಾಜಕೀಯ ದೈತ್ಯ ಶಕ್ತಿಯ ವಿರುದ್ದ ಸಾಮಾನ್ಯ ಶಾಸಕ ಸ್ಪರ್ಧೆ ಮಾಡಿದರೆ ರಾಜ್ಯದಲ್ಲಿ ಸುದ್ದಿಯಾಗುವುದು ಸಹಜ ? ಮಾಜಿ ಪ್ರಧಾನಿ, ಮಾಜಿ ಸಿಎಂ, ಮಾಜಿ ಸಚಿವ, ಹಾಲಿ ಎಂಪಿ, ಎಂಎಲ್.ಸಿ ಹೊಂದಿರುವ ಕುಟುಂಬದ ವಿರುದ್ಧ ಸಾಮಾನ್ಯ ವ್ಯಕ್ತಿಯ ಸ್ಪರ್ಧೆ ವಿಶೇಷ, ಕುಮಾರಸ್ವಾಮಿ ಅವರು ಹೇಳಿದಂತೆ ಸಾಮಾನ್ಯ ಕಾರ್ಯಕರ್ತನನ್ನು ಎದುರಿಸಲು? ಎಲ್ಲರೂ ಮುಗಿ ಬಿದ್ದಿದ್ದಾರೆ,. ಕುಮಾರಸ್ವಾಮಿ ಸಾಮಾನ್ಯ ಕಾರ್ಯಕರ್ತ ನನ್ನು ನಿಲ್ಲಿಸುತ್ತೇನೆ ಎಂದು ಹೇಳಿರುವುದು. ಆದರೆ ರೇವಣ್ಣ ಸಾಮಾನ್ಯ ಕಾರ್ಯಕರ್ತರೆ ಎಂದು ಪ್ರಶ್ನಿಸಿದ ಅವರು ಈ ಗೊಂದಲದಿಂದ ಕಾರ್ಯಕರ್ತರು ಭ್ರಮನಿರಸನಗೊಂಡಿದ್ದಾರೆ ಎಂದರು. ನಗರಸಭೆ ಅಧ್ಯಕ್ಷ ಆರ್. ಮೋಹನ್ ಇತರರು ಉಪಸ್ಥಿತರಿದ್ದರು.