ಹಾಸನ: ತಾಯಿ ತನ್ನ ಇಬ್ಬರೂ ಮಕ್ಕಳಿಗೆ ಇಲಿ ಔಷಧಿ ಕುಡಿಸಿ ತಾನು ಕುಡಿದಿದ್ದು, ಈ ಪೈಕಿ ಒಂದು ಮಗು ಮೃತಪಟ್ಟಿರುವ ಪ್ರಕರಣ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಪ್ರಕರಣದ ವಿವರ:
ಹಾಸನ ನಗರ, ಬೆಸ್ತರ ಬೀದಿ, ೨ ನೇ ಕ್ರಾಸ್, ಚಿಪ್ಪಿನಕಟ್ಟೆ ವಾಸಿ ಎಂ.ಡಿ.ದಿಲ್ದಾರ್ ಎಂಬುವವರ ಪತ್ನಿ ಜೀನತ್ಬಾನು ಎಂಬುವವ ರೇ ಈ ಪ್ರಕರಣ ಎಸಗಿದ ಮಹಿಳೆ. ಈ ಬಗ್ಗೆ ಜೀನತ್ ಬಾನು ಅವರ ಅತ್ತೆ ಸೀಮಾ ಅವರು ಠಾಣೆಗೆ ನೀಡಿರುವ ದೂರಿನನ್ವಯ, ತಮ್ಮ ಮಗ ಎಂ.ಡಿ.ದಿಲ್ದಾರ್ಗೆ ಈಗ್ಗೆ ೧೨ ವರ್ಷಗಳ ಹಿಂದೆ ಮಂಗಳೂರಿನ ಉಪ್ಪಿನಂಗಡಿ ಬಳಿ ಇರುವ ಸತ್ತಿಗಲ್ನ ಜೀನತ್ಬಾನು ಅವರನ್ನು ಮದುವೆ ಮಾಡಿದ್ದು, ಇವರಿಗೆ ೭ ವರ್ಷದ ಮಹಮ್ಮದ್ ಅಜಾನ್, ೬ ವರ್ಷದ ಸುನೈನಾ ದಿಲ್ದಾರ್ ಎಂಬ ಹೆಣ್ಣುಮಗಳು ಹಾಗೂ ಮೂರುವರೆ ವರ್ಷದ ಮಹಮ್ಮದ್ ಆರಾನ್ ಎಂಬ ಮಕ್ಕ ಳಿದ್ದು, ಎಲ್ಲರೂ ಒಟ್ಟಿಗೆ ಅನ್ನೋನ್ಯ ವಾಗಿ ವಾಸವಾಗಿದ್ದರು ಎಂದು ಹೇಳಿದರು.
ಸೊಸೆ ಜೀನತ್ಬಾನು ರವರ ಕಡೆಯವರು ಯಾರು ಮನೆಗೆ ಬರುವುದಿಲ್ಲವೆಂದು ಸೊಸೆ ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದು, ಇದೇ ವಿಷಯಕ್ಕೆ ಬೇಸರ ಮಾಡಿಕೊಂಡು ಕಳೆದ ಜ. ೭ರಂದು ಸಂಜೆ ೪ರ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಜೀನತ್ಬಾನು ಮನೆಯಲ್ಲಿ ತರಿಸಿಟ್ಟಿದ್ದ ಇಲಿ ಔಷದಿಯನ್ನು ಹಾಲಿನಲ್ಲಿ ಬೆರೆಸಿ ಮನೆಯಲ್ಲಿದ್ದ ತನ್ನ ಮಕ್ಕಳಾದ ಸುನೈನಾ ದಿಲ್ದಾರ್ ಮಗಳಿಗೂ ಹಾಗೂ ತನ್ನ ಕೊನೆಯ ಮಗನಾದ ಮಹಮದ್ ಆರಾನ್ ಇಬ್ಬರಿಗೂ ಕುಡಿಸಿ ತಾನೂ ಕುಡಿದಿದ್ದಾಳೆ.
ಮಾರನೆ ದಿನ ಮಗ ಮಹಮ ದ್ ಆರಾನ್ಗೆ ವಾಂತಿ ಬೇದಿ ಆಗಿದ್ದವನನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿ ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಮ ದ್ ಆರಾನ್ ಮಧ್ಯಾಹ್ನ ಮೃತಪಟ್ಟಿ ದ್ದಾನೆ. ಸೊಸೆ ಜೀನತ್ಬಾನು ಮತ್ತು ಮಗಳಾದ ೬ ವರ್ಷದ ಸುನೈನಾ ದಿಲ್ದಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ ಎಂದು ಸೀಮಾ ಅವರು ದೂರು ನೀಡಿದ್ದಾರೆಂದು ಎಸ್ಪಿ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.