News Karnataka Kannada
Thursday, May 02 2024
ಹಾಸನ

ಹಾಸನ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ – ಇಬ್ರಾಹಿಂ ಭವಿಷ್ಯ

Ibrahim resigns as JD(S) state president taking responsibility for the party's defeat
Photo Credit : News Kannada

ಹಾಸನ: ರಾಜ್ಯದಲ್ಲಿ ಜನರು ಹಾಗೂ ದೇವೇಗೌಡರ ಆಶೀರ್ವಾದದಿಂದ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕಾಲ ಸನಿಹವಾಗಿದ್ದು ಮೇ ೧೮ರಂದು ಜನತಾದಳ ಸರ್ಕಾರ ಅಧಿಕಾರಿಕೆ ಬರಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ ನುಡಿದರು.

ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಿಸಿ ಹ್ಯಾಂಡ್ ಪೋಸ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಕುಮಾರಸ್ವಾಮಿ ಅವರು ಪಕ್ಷದ ಪರ ಪ್ರಚಾರ ಮಾಡಿದ್ದು ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ನಾನು, ದೇವೇಗೌಡರು, ರೇವಣ್ಣ, ಭವಾನಿ ರೇವಣ್ಣ ಪ್ರವಾಸ ಮಾಡಲಿದ್ದೇವೆ ಎಂದರು.

ಗಂಡಸಿ ಸಂತೆ ಖಾಲಿಯಾಗಿದೆ, ಜೆಡಿಎಸ್ ನ ಸಂತೆ ಭರ್ತಿಯಾಗಿದ್ದು ಎಲ್ಲರೂ ಈ ಬಾರಿ ತೀರ್ಮಾನ ಮಾಡಿಕೊಂಡು ಬಂದಿದ್ದೀರಾ ಎಂದು ಸಾರ್ವಜ ನಿಕರನ್ನು ಉದ್ದೇಶಿಸಿ ಹೇಳಿದ ಅವರು ಮೋದಿ ರಾಹುಲ್ ಗಾಂಧಿ ಯಾರೇ ಬಂದರೂ ಹಾಸನ ಜಿಲ್ಲೆ ಗಂಡು ಮೆಟ್ಟಿದ ಗೌಡರ ಜಿಲ್ಲೆಯಾಗಿದೆ.

ಶಿವಲಿಂಗೇಗೌಡರಿಗೆ ಇಷ್ಟು ದಿನ ದೇವೇಗೌಡರು ಬೇಕಾಗಿತ್ತು ಈಗ ಸೋನಿಯಾ ಗಾಂಧಿ ಮೇಲೆ ಆಸೆ ಆಗಿದೆ, ಈ ಊರಿನಲ್ಲಿ ಮೈದು ಆಯ್ತು ಮುಂದಿನ ಊರಿಗೆ ಮೇಯಲು ಹೋಗುತ್ತಿದ್ದಾರೆ ಎಂದು ಟೀಕಿ ಸಿದರು. ಗೌಡರ ಮಕ್ಕಳು ಜಾತಿವಾದಿಗಳಲ್ಲ ಬೀಜ ಬಿತ್ತುವ ಜನ ಎಂದು ಹೇಳಿದ ಅವರು ದೇವೇ ಗೌಡರು ಹಾಗೂ ಅವರ ಮಕ್ಕಳು ಲಿಂಗಾಯಿತರ ವಿರೋಧಿಗಳಲ್ಲ ಹಾಸನ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಯಲ್ಲಿ ಇಬ್ಬರು ಲಿಂಗಾಯಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ ಎಂದು ನುಡಿದರು.

ದೇವೇಗೌಡರು ಕುಮಾರಸ್ವಾಮಿ ಮುಖ ನೋಡಿದರೆ ವೋಟು ಹಾಕುವುದಿಲ್ಲ ಎಂದು ಹೇಳಿದ ಶಿವಲಿಂಗೇಗೌಡರು ೧೫ ವರ್ಷ ಯಾರ ಮುಖದಿಂದ ಗೆದ್ದರೂ ಹಾಗೂ ಶಾಸಕರಾದರು ಎಂದು ಪ್ರಶ್ನಿಸಿದ ಅವರು ಇಂದು ಸೋನಿಯಾ ಗಾಂಧಿ ಮುಖ ಚೆನ್ನಾಗಿದೆ ಎಂದು ಕಾಂಗ್ರೆಸ್ ಗೆ ಹೋಗಿದ್ದೀಯಾ ಎಂದು ಲೇವಡಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು