ಹಾಸನ: ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು ಆಯಕಟ್ಟು ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಶೀಘ್ರದಲ್ಲಿ ಆಗಲಿದೆ ಎಂದು ಎಸ್ ಪಿ ಹರಿರಾಮ್ ಶಂಕರ್ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು ೨೨ ಮರಳು ಡಿಪೋಗಳು ಇದ್ದು ೩೦ ಲಕ್ಷ ವೆಚ್ಚದಲ್ಲಿ ೫೨ ಸಿಸಿ ಕ್ಯಾಮೆರಾ ಅಳವಡಿಕೆಗೆ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ಅವರು ಅನುದಾನ ಬಿಡುಗಡೆ ಮಾಡಿದ್ದಾರೆ .
ಆದಷ್ಟು ಶೀಘ್ರದಲ್ಲಿ ನಿಗಧಿತ ಸ್ಥಳದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.
ನಿಯಮದಂತೆ ಬೆಳಗ್ಗೆ ೬ರಿಂದ ಸಂಜೆ ೬ ರವರೆಗೆ ಮರಳು ಸಾಗಾಣಿಕೆಗೆ ಅವಕಾಶ ವಿದೆ ಆದರೆ ರಾತ್ರಿ ವೇಳೆ ಮರಳು ಸಾಕಾಣಿಕೆ ಬಗ್ಗೆ ವ್ಯಾಪಕವಾಗಿ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಿಸಿ ಕ್ಯಾಮೆರಾ ಅಳವಡಿಕೆ ನಂತರ ದಿನದ ೨೪ ಗಂಟೆ ನಿಗಾ ವಹಿಸಲಾಗುವುದು ಈ ಒಂದು ಕಾರ್ಯಾಚರಣೆ ಮುಂದಿನ ಒಂದು ವರ್ಷದವರೆಗೂ ನಡೆಯಲಿದೆ.
ಹೊಸದಾಗಿ ಮರಳು ಗಣಿಗಾರಿಕೆಗೆ ಲೈಸೆನ್ಸ್ ಪಡೆಯುವಾಗ ಆಯಾ ಡಿಪೋ ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಕೆಯನ್ನು ಮಾಡಬೇಕು ಹಾಗೂ ದಿನದ ೨೪ ಗಂಟೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ ಎಂದರು.
ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸಾರ್ವಜನಿಕರು ಸಹ ತಿಳಿಸಬಹುದಾಗಿದ್ದು ರಾತ್ರಿ ವೇಳೆ ಅಥವಾ ಅನಧಿಕೃತವಾಗಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ೧೧೨ ನಂಬರಿಗೆ ಕರೆ ಮಾಡುವ ಮೂಲಕ ಮಾಹಿತಿ ನೀಡಬ ಹುದಾಗಿದೆ ಎಂದರು.