ಹಾಸನ: ಕಳೆದ ರಾತ್ರಿ ಜಿಲ್ಲೆ ಸೇರಿದಂತೆ ಹಾಸನ ನಗರದ ಸುತ್ತಮುತ್ತ ವ್ಯಾಪಕ ಮಳೆಯಾಗಿದ್ದು ಲಕ್ಷಾಂತರ ರೂ ಮೌಲ್ಯದ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದೆ.
ನಗರದ ದೇವೇಗೌಡ ನಗರದಲ್ಲಿ ವಿಪರಿತ ಗಾಳಿ ಮಳೆಯ ಕಾರಣ ವಿದ್ಯುತ್ ಕಂಬಳು ಧರೆಗೆ ಉರುಳಿದ್ದು ನಿನ್ನೆ ರಾತ್ರಿ ೮:೩೦ ರಿಂದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು ಜನರು ಪರದಾಡುವಂತೆ ಆಗಿದೆ .ಇದುವರೆಗೂ ದೇವೇಗೌಡ ನಗರದಲ್ಲಿ ವಿದ್ಯುತ್ ಸಂಪರ್ಕ ದ ದುರಸ್ತಿ ಪೂರ್ಷವಾಗಿಲ್ಲ.ಇಲ್ಲಿನ ೫ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ದುರಸ್ತಿ ಕಾರ್ಯಾ ಪ್ರಗತಿಯಲ್ಲಿದೆ.
ಇಲ್ಲಿನ ಅಲ್ತಾಫ್ ಎಂಬುವರ ಮನೆ ಸಂಪೂರ್ಣ ಹಾನಿಯಾಗಿದ್ದು ಛಾವಣಿ ಕುಸಿದು ಹೋಗಿದೆ ಕಳೆದ ೨೦ ವರ್ಷಗಳಲ್ಲಿ ಯೇ ಕಾಣದಂತ ಗಾಳಿಯೊಂದಿಗೆ ಬಂದಂತಹ ಮಳೆ ಯ ಕಾರಣ ಛಾವಣಿ ಹಾನಿಯಾಗಿ ಅಲ್ತಾಫ್ ಅವರ ತಂಗಿಯ ಮದುವೆಯ ಹಿನ್ನೆಲೆಯಲ್ಲಿ ಸಂಗ್ರಹಿಸಿದ ಬಟ್ಟೆ ಹಾಗೂ ಇತರೆ ವಸ್ತುಗಳು ಸಂಪೂರ್ಣ ಹಾನಿಗೀಡಾಗಿದೆ. ಜೂನ್ ೪ ರಂದು ಅವರ ತಂಗಿಯ ಮದುವೆ ಸಂಬಂಧ ಹೊಸ ಬಟ್ಟೆಗಳನ್ನು ಸಂಗ್ರಹಿಸಲಾಗಿತ್ತು.
ಪಕ್ಕದ ಮನೆ ನಂಜಮ್ಮ ಅವರ ಮನೆಯೂ ಸಹ ಸಂಪೂರ್ಣ ಹಾನಿಯಾಗಿದ್ದು ವಿಪರೀತ ಗಾಳಿಗೆ ಇಡೀ ಮನೆಯ ಮೇಲ್ಚಾವಣಿ ಪಕ್ಕದ ರಸ್ತೆ ವರೆಗೂ ಹಾರಿ ಹೋಗಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬವು ಮುರಿದುಹೋಗಿದೆ.
ಇದೇ ದೇವೇಗೌಡ ನಗರದ ಮನೆಯ ಮುಂದೆ ನಿಲ್ಲಿಸಲಾಗಿದ್ದ ಮೋಹನ್ ಅವರ ಆಕ್ಟಿವ್ ಹೋಂಡಾ ಮೇಲೆ ಲೈಟ್ ಕಂಬ ಬಿದ್ದು ಹಾನಿ ಉಂಟಾಗಿದ್ದು ಇದುವರೆಗೂ ಜನಪ್ರತಿನಿಧಿ ಗಳಾಗಲಿ ಅಧಿಕಾರಿಗಳಾಗಿಡಿ ಪರಿಶೀಲನೆ ನಡೆಸಿ ಪರಿಹಾರದ ಕುರಿತು ಕ್ರಮಗಳನ್ನು ಕೈಗೊಂಡಿಲ್ಲ ಎಂದು ಇಲ್ಲಿನ ನಾಗರಿಕರು ತಮ್ಮ ಅಳಲು ತೋಕೊಂಡಿದ್ದಾರೆ.
ಮದ್ಯಾಹ್ನಾ ೧೨ ಗಂಟೆ ಯಿಂದ ವಿದ್ಯುತ್ ನಿಗಮದ ಅಧಿ ಕಾರಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದು ಸಂಜೆಯ ವೇಳೆಗೆ ವಿದ್ಯುತ್ ಸಂಪರ್ಕ ಸಾಧ್ಯತೆಗಳು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಸನ ನಗರದ ಹಲವು ಬಡಾವಣೆಗಳಲ್ಲಿ ಮರಗಳ ರಂಭೆ ಗಳು ಮುರುದು ಬಿದ್ದಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ ರಾತ್ರಿ ಎಂಟು ಮೂವತ್ತಕ್ಕೆ ಶುರುವಾದ ಮಳೆ ಒಂದುವರೆ ಗಂಟೆಗೂ ಹೆಚ್ಚು ಕಾಲ ಎಡಬಿಡದೆ ಸುರಿದಿದೆ. ಜಿಲ್ಲೆಯ ಸಕಲೇಶಪುರ ಆಲೂರು ಚನ್ನರಾಯಪಟ್ಟಣ ಬೇಲೂರು ಸೇರಿದಂತೆ ಇತರೆ ತಾಲ್ಲೂಕಿನಲ್ಲಿ ವ್ಯಾಪಕ ಮಳೆ ಸುರಿದಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಬಾರಿ ಸದ್ದು ಮಾಡುತ್ತಿದ್ದು ಇವರ ಜೊತೆ ಅವರ ತಂದೆ…
ಬಂಡೀಪುರದಲ್ಲಿ ಸಪಾರಿಗೆ ತೆರಳಿದ್ದ ವಾಹನಗಳ ಸನಿಹದಲ್ಲೇ ಹುಲಿಯೊಂದು ಜಿಂಕೆಯನ್ನ ಭೇಟೆಯಾಡಿ ಎಳೆದೊಯ್ಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುಂಬರುವ 7 ಮೇ 2024 ರಂದು ಜರುಗುವ ಸಾರ್ವತ್ರಿಕ ವಿಜಯಪುರ (ಮೀಸಲು) ಲೋಕಸಭೆ ಚುನಾವಣೆ ಪ್ರಚಾರದ ಅಂಗವಾಗಿ ಸ್ಟಾರ್ ಪ್ರಚಾರಕರು…
ಜಿಲ್ಲೆಯ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಶಾಸಕರಾದ ಶಿವಪುತ್ರಪ್ಪ ದೇಸಾಯಿಯವರನ್ನು ಭಾನುವಾರ ತಾಳಿಕೋಟೆಯಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ.ರಾಜು…
ಬೀದರ್ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವರಾದ ಭಗವಂತ ಖೂಬಾರವರು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ…
ಕರ್ನಾಟಕ ಪ್ರವಾಸದಲ್ಲಿರುವ ಮೋದಿಗೆ ಗೋ ಬ್ಯಾಕ್ ಘೋಷಣೆ ಎದುರಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಡಿಎನ್ಎ ಕರ್ನಾಟಕ…