ಹಾಸನ: ಹಣಕಾಸಿನ ವಿಚಾರಕ್ಕೆ ತನ್ನ ಸ್ನೇಹಿತನನ್ನೆ ಕೊಲೆ ಮಾಡಿರುವ ಪ್ರಕರಣ ಇತ್ತೀಚೆಗೆ ಸಕಲೇಶಪುರ ತಾಲೂಕಿನ ಬ್ಯಗಡಹಳ್ಳಿ ಹ್ರಮದಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಹೆತ್ತೂರು ಹೋಬಳಿ ಬ್ಯಾಗಡಹಳ್ಳಿ ಗ್ರಾಮದ ಸುನಿಲ್ ಕುಮಾರ್ ಎಂಬಾತನ ಮೇಲೆ ಅದೇ ಗ್ರಾಮದ ಸ್ನೇಹಿತರೆ ಆದ ಚಂದನ್, ಹಾಗೂ ಸತೀಶ್ ಎಂಬ ಇಬ್ಬರು ಆರೋಪಿಗಳು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ, ಮೃತ ಸುನಿಲ್ ಆರೋಪಿ ಸತೀಶ್ ಎಂಬಾತನಿಗೆ ಕೊಡಬೇಕಿದ್ದ ೨೦ ಸಾವಿರ ಹಣವನ್ನು ವಾಪಸ್ ಕೊಡುವಂತೆ ಕೇಳಲಾಗಿ ಇದೆ ವಿಚಾರಕ್ಕೆ ಗಲಾಟೆ ನಡೆದು ಕೊಲೆ ಮಾಡಲಾಗಿದೆ.
ಮೂವರು ಒಟ್ಟಿಗೆ ಮಧ್ಯದ ಅಂಗಡಿಯಿಂದ ಮಧ್ಯ ಖರೀದಿಸಿ ಸತೀಶ್ ಅವರ ತೋಟಕ್ಕೆ ಆಗಮಿಸಿ ಪಾರ್ಟಿ ಮಾಡಿದ್ದು ನಂತರ ಪರಸ್ಪರ ವಾಗ್ವಾದ ಮತ್ತು ಗಲಾಟೆ ನಡೆದಿದೆ ಪ್ರಕರಣವನ್ನು ಸಕಲೇಶಪುರ ಅಪರ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್, ವೃತ್ತ ನಿರೀಕ್ಷಕರಾದ ಚೈತನ್ಯ ಸಬ್ ಇನ್ಸ್ಪೆಕ್ಟರ್ ನವೀನ್ ಅವರ ತಂಡ ಈ ಪ್ರಕರಣವನ್ನು ಭೇದಿಸಿದೆ ಎಂದರು.