News Karnataka Kannada
Monday, May 06 2024
ಹಾಸನ

ಹಾಸನ: ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆ

District Development Coordination and Monitoring Committee Disha meeting
Photo Credit : News Kannada

ಹಾಸನ: ಹೆದ್ದಾರಿ ಕಾಮಗಾರಿ ವಿಳಂಬ, ಗೋ ಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿನ ಲೋಪ, ಸಿಎಲ್ ೭ ಲೈಸೆನ್ಸ್ ಬೇಕಾಬಿಟ್ಟಿ ನಿರ್ವಹಣೆ ಸೇರಿದಂತೆ ಇತರೆ ಪ್ರಮುಖ ವಿಷಯದ ಕುರಿತು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ರವರು ಅಧ್ಯಕ್ಷತೆ ಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯಲ್ಲಿ ಚರ್ಚೆ ನಡೆಯಿತು.

ಹೆದ್ದಾರಿ ಕಾಮಗಾರಿ ವಿಳಂಬ:
ಹಾಸನ -ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿ ಹಲವು ವರ್ಷ ಕಳೆದರು ಮುಗಿಯುತ್ತಿಲ್ಲ.. ಕಾಮಗಾರಿ ವಿಳಂಬ ಕಾರಣ ರಸ್ತೆ ಅಪಘಾತ ಸಾಮಾನ್ಯ ವಾಗಿದೆ. ಕಾಮಗಾರಿ ಮುಗಿಯುವವರೆಗೆ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಿ ಸಂಚಾರಿ ಯೋಗ್ಯ ಮಾಡುವಂತೆ ಹಲವು ಬಾರಿ ಮನವಿ ಮಾಡಿದರು ಹಾಗೂ ದಿಶಾ ಸಭೆಯಲ್ಲಿ ತಿಳಿಸಿದರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಣಿಕಂಠನ್ ಅವರು ಮುಂದಿನ ಮಾರ್ಚ್ ವೇಳೆಗೆ ಹಾಸನ ಸಕಲೇಶಪುರ ಮಾರ್ಗದ ಎರಡು ಪಥದ ರಸ್ತೆ ಕಾಮಗಾರಿವಪೂರ್ಣಗೊಳ್ಳಲಿದೆ ಸಕಲೇಶಪುರದಿಂದ -ಮಾರನಹಳ್ಳಿ ರಸ್ತೆ ಕಾಮಗಾರಿ ಜೂನ್ ಅಂತ್ಯದ ವೇಳೆಗೆ ಪೂರ್ಣಗೊಳಿಸುವುದಾಗಿ ತಿಳಿಸಿದರು .

ಪ್ರತಿ ದಿಶಾ ಸಭೆಯಲ್ಲೂ ಇದೇ ರೀತಿ ಹೇಳಿಕೆ ನೀಡುತ್ತೀರಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಜ್ವಲ್ ಸೂಚನೆ ನೀಡಿದರು .

ಬಾಳ್ಳುಪೇಟೆ ಸಮೀಪ ಅಂಡರ್ ಪಾಸ್ ನಿರ್ಮಾಣ ಅವೈಜ್ಞಾನಿಕವಾಗಿದ್ದು ಬಾರ್ ವೆಲ್ ಲಾರಿ ಸೇರಿದಂತೆ ಇತರೆ ವಾಹನ ಸಂಚಾರಕ್ಕೂ ಯೋಗ್ಯವಾಗಿಲ್ಲ ಈ ರೀತಿ ಕಾಮಗಾರಿ ಮಾಡಿದರೆ ಹೇಗೆ…!! ಎಂದು ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು .

ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಮೂರು ವರ್ಷವಾದರೂ ಪೂರ್ಣಗೊಂಡಿಲ್ಲ ಎಂದು ಕುಮಾರಸ್ವಾಮಿ ಸಭೆಯ ಗಮನಕ್ಕೆ ತಂದರು ಹಾಗೂ ಕಾಮಗಾರಿ ವಿಳಂಬ ಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸಕಲೇಶಪುರ ಬೈಪಾಸ್ ರಸ್ತೆಯ ಸೇತುವೆ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕಿತು ಮಾಡುವಂತೆ ಸಭೆಯಲ್ಲಿ ತಿಳಿಸಿದರು.

ಸಿಎಲ್ ಸೆವೆನ್ ಲೈಸೆನ್ಸ್ ಬೇಕಾಬಿಟ್ಟಿ ನಿರ್ವಹಣೆ:
ಹಾಸನ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ಸಿ ಎಲ್ ಸೆವೆನ್ ಲೈಸೆನ್ಸ್ ಅನ್ನು ಬೇಕಾಬಿಟ್ಟಿಯಾಗಿ ವಿತರಣೆ ಮಾಡಲಾಗುತ್ತಿದೆ. ಇದರಿಂದ ಯುವಕರು ಹಾಗೂ ವಿದ್ಯಾರ್ಥಿಗಳು ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಸಿಎಲ್ ಸೆವೆನ್ ಲೈಸೆನ್ಸ್ ನ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ನಿರ್ವಹಣೆ ಮಾಡಲಾಗುತ್ತಿದ್ದು ಈ ಲೈಸೆನ್ಸ್ ನಿಯಮದಡಿ ಮಧ್ಯವನ್ನು ಹೊರಗಡೆ ಮಾರಾಟ ಮಾಡುವಂತಿಲ್ಲ ಆದರೆ ಬಹುತೇಕ ಲೈಸೆನ್ಸ್ ಹೊಂದಿರುವವರು ಬಾರ್ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಈ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಒತ್ತಾಯಿಸಿದರು .

ಇದಕ್ಕೆ ಧ್ವನಿಗೂಡಿಸಿ ಮಹಿಳಾ ಸದಸ್ಯೆ ಅಬಕಾರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಇಂದು ಜಿಲ್ಲೆಯ ಹಲವು ಗ್ರಾಮಗಳ ಮನೆಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ ಇದರಿಂದ ಯುವಕರು ಸೇರಿದಂತೆ ಗ್ರಾಮದ ಜನರು ಮಧ್ಯದ ದಾಸರಾಗುತ್ತಿದ್ದಾರೆ ಎಂದು ಆರೋಪಿಸಿದರು .

ಕೂಡಲೇ ಈಗಾಗಲೇ ನೀಡಲಾಗಿರುವ ಸಿಎಲ್ ಸೆವೆನ್ ಲೈಸೆನ್ಸ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಬೇಕಾಬಿಟ್ಟಿ ಮಧ್ಯ ಮಾರಾಟವನ್ನು ತಡೆಯಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಚುನಾವಣೆ ಹತ್ತಿರವಾಗುತ್ತಿರು ಹಿನ್ನೆಲೆಯಲ್ಲಿ ಸೂಚನೆ ನೀಡಲಾಗಿದೆ ಹಾಗೂ ಲೈಸೆನ್ಸ್ ನಿಯಮ ಉಲ್ಲಂಘನೆ ಸಂಬಂಧ ದೂರುಗಳು ಬಂದಿದ್ದು ಮುಂದಿನ ದಿನ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಕ್ರಮವಹಿಸಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.

ನಾನು ಮೊದಲ ಬಾರಿಗೆ ಶಾಸಕನಾಗಿ ಅಧಿಕಾರ ವಹಿಸಿಕೊಂಡಾಗ ಅಬಕಾರಿ ಇಲಾಖೆಯಿಂದ ೫೪೦೦ ಕೋಟಿ ಆದಾಯ ಇತ್ತು ಇಂದು ೫೧ ಸಾವಿರ ಕೋಟಿಗೆ ತಲುಪಿದೆ .ಸಿಎಲ್ ಸೆವೆಲ್ ಲೈಸೆನ್ಸ್ ಹಿಂದೆ ಇದ್ದ ನಿಯನಇಲ್ಲ ಬೇಕಾಬಿಟ್ಟಿ ನಿರ್ವಹಣೆ ಇದೆ ಎಂದು ಶಿವಲಿಂಗೇಗೌಡ ಆರೋಪಿಸಿದರು.

ಸಭೆಯಲ್ಲಿ ಶಾಸಕರಾದ ಎಚ್.ಡಿ.ರೇವಣ್ಣ, ಜಿಪಂ ಸಿಇಒ ಕಾಂತರಾಜು, ಜಿಲ್ಲಾಧಿಕಾರಿ ಎಮ್‌ಎಸ್ ಅರ್ಚನಾ, ಎಸ್ಪಿ ಹರಿರಾಂ ಶಂಕರ್, ಹಾಜರಿದ್ದರು.

ಗೋ ಹತ್ಯೆ ನಿಷೇಧ ಕಾಯ್ದೆ: ರೈತರಿಗೆ ತೊಂದರೆ

ಗೋ ಹತ್ಯೆ ನಿಷೇಧ ಕಾಯ್ದೆ ನೆಪವಾಗಿಸಿಕೊಂಡು ಪೊಲೀಸ್ ಇಲಾಖೆಯಿಂದ ರೈತರಿಗೆ ತೊಂದರೆ ನೀಡಲಾಗುತ್ತಿದೆ. ರೈತರು ಗ್ರಾಮಗಳಿಗೆ ಗೋವುಗಳನ್ನು ಸಾಗಣೆ ಮಾಡುವ ವೇಳೆ ತಡೆದು ಪ್ರಕರಣ ದಾಖಲಿಸಲಾಗುತ್ತಿದೆ. ಗೋ ಸಾಗಾಣಿಕೆ ಗೆ ಸ್ಥಳೀಯ ಪಿಡಿಒ ಹಾಗೂ ವೈದ್ಯರ ಸಹಿಯನ್ನು ಪಡೆಯುವಂತೆ ತಾಕಿತು ಮಾಡಲಾಗುತ್ತಿದೆ ಆದರೆ ಬಹುತೇಕ ಗ್ರಾಮದಲ್ಲಿ ಪಶುವೈದ್ಯರೇ ಇರೋದಿಲ್ಲ ಇಂತಹ ಸಂದರ್ಭಗಳಲ್ಲಿ ರೈತರು ಹೇಗೆ ಸಹಿ ಹಾಕಿಸಲು ಸಾದ್ಯ ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು.

ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿರುವ ಸರ್ಕಾರ ಗೋ ಶಾಲೆಗಳನ್ನು ತೆರೆದಿಲ್ಲ ಎಂದು ಶಾಸಕರು ಹಾಗೂ ಸಂಸದರಾದ ಪ್ರಜ್ವಲ್ ರೇವಣ್ಣ ಸಭೆಯ ಗಮನಕ್ಕೆ ತಂದರು ಇದಕ್ಕೆ ಉತ್ತರಿಸಿದ ಪಶುಸಂಗೋಪನ ಇಲಾಖೆ ಅಧಿಕಾರಿಗಳು ಉತ್ತರಿಸಿ ಜಿಲ್ಲೆಯಲ್ಲಿ ವರ್ಷಕ್ಕೆ ೨೫ ರಿಂದ ೩೦,೦೦೦ ಗಂಡು ಕರಗಳು ಜನ್ಮ ತಾಳುತ್ತಿದೆ.ಒಂದು ಸರ್ಕಾರಿ ಗೋ ಶಾಲೆ ಇದೆ ಹಾಗೂ ಮೂರು ಗೋಶಾಲೆ ತೆರೆಯಲು ಅನುಮತಿ ದೊರೆತಿದೆ ಎಂದು ಮಾಹಿತಿ ನೀಡಿದರು.

ಶಾಸಕ ಶಿವಲಿಂಗೇಗೌಡ ಮಾತನಾಡಿ ಸಾವಿರಾರು ಗಂಡು ಕರುಗಳು ಹುಟ್ಟಿದರೆ ಇವುಗಳನ್ನು ಸಾಕಲು ಆಗದೆ ರೈತರು ಮಾರಾಟ ಮಾಡುತ್ತಿದ್ದಾರೆ ಅಥವಾ ಬೀದಿಗೆ ಬಿಡುತ್ತಿದ್ದಾರೆ ಇದರಿಂದ ನಾಯಿ ನರಿಗಳು ಗೋವುಗಳನ್ನು ತಿಂದು ಸುತ್ತಲ ಪರಿಸರ ಹದಗೆಡುತ್ತಿದೆ ಇಂತಹ ಹೀನಾಯ ಸ್ಥಿತಿಗೆ ಅಧಿಕಾರಿಗಳೆ ಕಾರಣ ಗೋವುಗಳ ಶಾಪ ನಿಮಗೆ ತಟ್ಟಲಿದೆ ಎಂದು ದೂರಿದರು.

ಕೇವಲ ೪೦೦ ರಿಂದ ೫೦೦ ಹಸುಗಳನ್ನು ಸಾಕಲು ಮಾತ್ರ ಗೋಶಾಲೆಗಳು ಸಮರ್ಥವಾಗಿದ್ದು ಉಳಿದ ಸಾವಿರಾರು ಹಸು ಕರುಗಳನ್ನು ರೈತರು ಏನು ಮಾಡಬೇಕು ಎಂದು ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಹಾಗೂ ಸಂಸದ ಪ್ರಜ್ವಲ್ ಪ್ರಶ್ನಿಸಿದರು .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು