News Karnataka Kannada
Sunday, May 05 2024
ಹಾಸನ

ಬೇಲೂರು: ಮೊಲದ ಮೂಗಿಗೆ ಚಿನ್ನದ ಮೂಗುತಿ

Beluru
Photo Credit : News Kannada

ಬೇಲೂರು: ಚನ್ನಕೇಶವ ದೇಗುಲದಲ್ಲಿ ಸಂಕ್ರಾಂತಿಯಂದು ನಡೆಯುವ ಕುದುರೆ ಉತ್ಸವ ಅಥವಾ ದೇವರ ಕಾಡು ಬೇಟೆ ಉತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಶ್ರೀ ಚನ್ನಕೇಶವ ದೇವರ( ಕುದುರೆ) ಅಶ್ವಾರೋಹಣೋತ್ಸವ ಮತ್ತು ಸಾಂಪ್ರದಾಯಿಕ ಮೊಲ ಬಿಡುವ ಪದ್ಧತಿ ಆಚರಣೆ ಮೂಲಕ ಸಂಕ್ರಾಂತಿ ಸಂಭ್ರಮ ವನ್ನು ಹಿಂದಿನಿಂದಲೂ ಈ ವಿಶ್ವ ಪ್ರಸಿದ್ಧ ಕೇಂದ್ರದಲ್ಲಿ ಆಚರಿಸಲಾಗುತ್ತಿದೆ

ಚನ್ನಕೇಶವ ದೇವಾಲಯ ದಿಂದ ಉತ್ಸವವು ೨ ಕಿ.ಮೀ. ದೂರದ ನೆಹರೂ ನಗರಕ್ಕೆ ಮಂ ಗಳವಾದ್ಯದೊಂದಿಗೆ ಮೆರವಣಿ ಗೆಯಲ್ಲಿ ತೆರಳಿ ಹಳೇಬೀಡು ರಸ್ತೆಯಲ್ಲಿ ಹಾಕಲಾಗಿದ್ದ ವಿಶೇಷ ಪೂಜಾ ಚಪ್ಪರದಡಿ ಕುಳ್ಳಿರಿಸಿ ವಿಶೇಷ ಪೂಜೆ ನಡೆಸಲಾಯಿತು.

ಈ ವೇಳೆ ದೇಗುಲದಲ್ಲಿ ನಡೆದುಕೊಂಡು ಬಂದಿರುವ ಇತಿಹಾಸದ ವಿಶೇಷ ಆಚರಣೆ ಹಾಗೂ ಸಂಪ್ರದಾಯದಂತೆ, ಕಾಡುಮೊಲ ತಂದು ಅದನ್ನು ದೇವರ ಮೊಲವೆಂದು ಪರಿಗಣಿಸಿ ಪೂಜೆ ನೆರವೇರಿಸಿ ಅದರ ಮೂಗಿಗೆ ಚಿನ್ನದ ಮುರ (ಮೂಗುತಿ) ಚುಚ್ಚಿ ದೇವರಿಗೆ ಸ್ಪರ್ಶಿಸಿ ಪೂಜೆ ಸಲ್ಲಿಸಲಾಯಿತು.

ಹಿನ್ನೆಲೆ: ವಿಜಯನಗರ ಅರಸರ ಕಾಲದಲ್ಲಿ ಉತ್ತರಾಯಣ ಆರಂಭದಲ್ಲಿ ಈ ಉತ್ಸವ ಆರಂಭಗೊಂಡಿದ್ದು , ಇಂದಿಗೂ ಆಚರಣೆಯಲ್ಲಿದೆ. ಇದಕ್ಕೆ ಅದರದೆ ಆದ ವೈಶಿಷ್ಟ್ಯವಿದೆ.

ವೈಶಿಷ್ಟ್ಯ: ಚನ್ನಕೇಶವ ದೇವರು ಅಶ್ವಾರೋಹಿಯಾಗಿ ಬೇಟೆಗಾಗಿ ಕಾಡಿಗೆ ತೆರಳುತ್ತಾರೆ. ಈ ಸಂದರ್ಭ ಚನ್ನಕೇಶವ ದೇ ವರ ಪತ್ನಿ ಲಕ್ಷ್ಮೀ ತವರು ಮನೆಗೆ ಹೊರಡುತ್ತಾಳೆ. ತವರಿಗೆ ಹೋ ಗುವುದು ಬೇಡವೆಂದ ಚನ್ನಕೇ ಶವನ ಮಾತಿಗೆ ಗೌರವ ಸಿಗು ವುದಿಲ್ಲ. ಇದರಿಂದ ಕೋಪಗೊಂ ಡ ಚನ್ನಕೇಶವನು ಕುದುರೆ ಏರಿ ಬೇಟೆಗೆ ಹೊರಡುತ್ತಾನೆ. ಕೋಪಗೊಂಡ ವಿಷಯ ಪತ್ನಿ ಲಕ್ಷ್ಮಿಗೆ ತಿಳಿದು ಪತಿಯನ್ನು ವಾಪಸ್ ಕರೆಸಿಕೊಳ್ಳಲು ಬೇಟೆಗೆ ಹೋಗುತ್ತಿದ್ದ ಮಾರ್ಗಕ್ಕೆ ಅಡ್ಡ ಲಾಗಿ ಮೊಲವನ್ನು ಬಿಡಿಸುತ್ತಾಳೆ. ಮೊಲ ಅಡ್ಡಲಾಗಿ ಬಂದಿದ್ದನ್ನು ಕಂಡು, ಇದು ಬೇಟೆಗೆ ಅಪಶಕುನ ಎಂದು ಭಾವಿಸಿದ ಚನ್ನಕೇಶವ ದೇವರು ವಾಪಸ್ ಬರುತ್ತಾನೆ ಎಂಬ ಕಥೆಯಿದ್ದು ,ಇದು ದೇಗು ಲದಲ್ಲಿರುವ ದಾಖಲೆಯೂ ಪುಷ್ಠಿ ಕರಿಸುತ್ತದೆ. ಇದಕ್ಕೆ ಪೂರಕವಾಗಿ ಉತ್ಸವವನ್ನು ಮಾರ್ಗ ಮಧ್ಯೆಯೆ ಮೊಟಕುಗೊಳಿಸಿ ವಾಪಸ್ ತರಲಾಗುತ್ತದೆ.

ಪಟೇಲರ ಸಂಪ್ರದಾಯ: ಮೊಲ ಬಿಡುವ ಪದ್ಧತಿ ಆಚರಣೆಯಂತೆ ಸಮೀಪದ ದೊಡ್ಡಬ್ಯಾಡಿಗೆರೆ ಪಟೇಲರು ಮೊಲವನ್ನು ಹಿಡಿದು ತರುವ ಸಂಪ್ರದಾಯವಿದೆ. ಪೂಜಾ ಕಾರ್ಯವನ್ನು ಮುಖ್ಯಅರ್ಚಕ ನರಸಿಂಹ ಪ್ರೀಯ ಭಟ್ಟರು ಹಾಗೂ ಶ್ರೀನಿವಾಸ್‌ಭಟ್ ಇತರರು ನಡೆಸಿದರು.

ದೇಗುಲದ ಕಾರ್ಯನಿರ್ವಹ ಣಾಧಿಕಾರಿ ಆರ್. ವಿದ್ಯುಲತಾ, ಆರ್.ಐ. ಪ್ರಕಾಶ್, ವಿ.ಎ. ಹನು ಮಂತು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ.ನಾರಾಯಣ ಸ್ವಾಮಿ, ಸದಸ್ಯ ಪ್ರಮೋದ್, ರವಿಶಂಕರ್, ಅಡ್ಡೆಗಾರರಾದ ಶೈಲೇಶ್, ತಾರೇ ಶ್, ಗೋಪಿ, ವಿಜಯಲಕ್ಷ್ಮಿ, ತಾ.ಪಂ.ಮಾಜಿ ಅದ್ಯಕ್ಷ ಪರ್ವತಯ್ಯ ಇನ್ನಿತರ ಸದಸ್ಯರು, ವಿವಿಧ ಸಂಘಗಳ ಪ್ರಮುಖರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು