ಹೆಚ್.ಡಿ.ಕೋಟೆ: ಕಬಿನಿ ಜಲಾಶಯದಿಂದ 15ಸಾವಿ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದು ಜಲಾಶಯದ ಮುಂಭಾಗ ಇರುವ ಸೇತುವೆ ಸಂಪೂರ್ಣ ಮುಳುಗಡೆ ಆಗಿರುವ ಹಿನ್ನೆಲೆಯಲ್ಲಿ, ಸೇತುವೆ ಬಳಿ, ಇರುವ ಗೇಟ್ ಗಳನ್ನ ಮುಚ್ಚಲಾಗಿದೆ.
ಹ್ಯಾಂಡ್ ಪೋಸ್ಟ್ ನಿಂದ ಎನ್. ಬೇಗೂರಿಗೆ ತೆರಳುವ ಬಿದರಹಳ್ಳಿ ,ತೆರಣಿಮುಂಟಿ, ಮೊಸರಹಳ್ಳ, ಬಸಾಪುರ, ಕೆಂಚನಹಳ್ಳಿ, ಮೂರ್ ಬಾಂದ್, ಭೀಮನ ಕೊಲ್ಲಿ, ಎನ್. ಬೇಗೂರು, ಬೀರಂಬಳ್ಳಿ, ಗೆಂಡತ್ತೂರು ಗ್ರಾಮಗಳಿಗೆ ತೆರಳುವರ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಹ್ಯಾಂಡ್ ಪೋಸ್ಟ್ ಸರಗೂರು ಮಾರ್ಗವಾಗಿ ತೆರಳ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಬಿನಿ ಜಲಾಶಯದ ಮಂಗಳವಾರದ ನೀರಿನ ಮಟ್ಟ ಗರಿಷ್ಠ ಮಟ್ಟ 2284 ಅಡಿಗಳು, ಇಂದಿನ ಮಟ್ಟ 2281 ಅಡಿಗಳು, ಒಳಹರಿವು 29 ಸಾವಿರ ಕ್ಯೂ ಸೆಕ್ಸ್ ಗಳು, ಹೊರ ಹರಿವು 15 ಸಾವಿರ ಕ್ಯೂಸೆಕ್ಸ್.
ಕೇರಳದ ವೈನಾಡಿನಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ, ಒಳ ಹರಿವು 29 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರು ಹಿನ್ನೆಲೆಯಲ್ಲಿ ಜಲಾಶಯದಿಂದ ಇನ್ನು ಹೆಚ್ಚಿನ ಪ್ರಮಾಣ ನೀರು ಹೊರಬಿಡು ಸಾಧ್ಯತೆಗಳಿರುವ ಕಾರಣ, ದನಕರು ಮೇಯಿಸುವವರು, ರೈತರುಗಳು, ಹಾಗೂ ಮೀನುಗಾರರು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಕಬಿನಿ ಅಧಿಕಾರಿ ವರ್ಗ ತಿಳಿಸಿದೆ.