ಬೇಲೂರು: ಬೇಲೂರಿನಲ್ಲಿ ರಾಜಕಾರಣ ಮಾಡುವ ಸಲುವಾಗಿ ವಿಶ್ವ ವಿಖ್ಯಾತವಾಗಿರುವ ಚನ್ನಕೇಶವ ದೇಗುಲ ಸ್ಥಳವನ್ನು ತೀವ್ರ ವಿವಾ ದಗ್ರಸ್ತವನ್ನಾಗಿ ಮಾಡಿರುವವರನ್ನು ಗಡಿಪಾರು ಮಾಡುವಂತೆ ಪ್ರಗತಿಪರ ಸಂಘಟನೆಗಳಿಂದ ಆಗ್ರಹಿಸಿದ್ದಾರೆ.
ಜೂನಿಯರ್ ಕಾಲೇಜು ಮೈದಾನದಿಂದ ಚೆನ್ನಕೇಶವ ದೇಗುಲದವರೆಗೂ ಜಾಥ ನಡೆಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮಿ ಗೌಡ ಬೇಲೂರಿಗೆ ಕೆಲವರು ಎಲ್ಲಿಂದಲೊ ಬಂದು ಇಲ್ಲಿ ರಾಜಕಾರಣ ಮಾಡಿ ಕೋಮುಭೇದ ಸೃಷ್ಟಿಸಿಕೊಂಡು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ಅದರಲ್ಲೂ ಚನ್ನಕೇಶವ ಸ್ವಾಮಿರಥೋತ್ಸವ ಸಂದರ್ಭದಲ್ಲಿ ಮುಸ್ಲಿಂ ಖಾಜಿಗಳು ಕುರಾನ್ ಪಠಣ ಮಾಡಬಾರದು ಎಂದು ವಿವಾದ ಮಾಡಿದ್ದಾರೆ. ಇವರ ಉದ್ದೇಶ ಬೇಲೂರನ್ನು ವಿವಾದಗ್ರಸ್ತ ಸ್ಥಳಮಾಡಬೇಕೆನ್ನುವುದು ಇವರ ನಡೆಯಾಗಿದೆ. ಬೇಲೂರಿನ ಜನ ಇಂತವರಿಗೆ ಮಣೆ ಹಾಕುವ ಜನರಲ್ಲಾ ಇಲ್ಲಿ ನಾವೆಲ್ಲರೂ ಒಂದೇ ಇದ್ದೆವೆ. ಐಕ್ಯತೆಯಿಂದ ಜೀವನ ಸಾಗಿಸುತ್ತಿದ್ದೇವೆ. ಸುಮಾರು ೩೫೦ ವರ್ಷಗಳಿಂದ ಕುರಾನ್ ಪಠಣ ಮಾಡಿಕೊಂಡು ಬರುತ್ತಾ ಇದ್ದಾರೆ. ಮುಂದೂಕೂಡ ಅದನ್ನು ನೆರವೇ ರಿಸಿಕೊಂಡು ಹೋಗಲಿದ್ದು ಅದಕ್ಕಾಗಿ ನಾವು ಶಾಂತಿಸೌಹಾರ್ದ ತೆಗಾಗಿ ಈ ನಡಿಗೆಯನ್ನು ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ತಹಸೀಲ್ದಾರ್ ಎಂ.ಮಮತ ಅವರಗೆ ಮನವಿ ನೀಡಿ ಮಾತನಾಡಿದ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ವಿಶ್ವ ಪ್ರಸಿದ್ದ ಬೇಲೂರು ಚನ್ನಕೇಶವ ಸ್ವಾಮಿ ದೇವಾಲಯವು ಲೋಕಾರ್ಪಣೆ ಗೊಂಡು ೯ ಶತಮಾನಗಳು ಕಳೆದಿದ್ದು ಅಂದಿನಿಂದ ಇಲ್ಲಿಯವರೆಗೆ ಊರಿನ ಸಂಪ್ರದಾಯದಂತೆ ಚನ್ನಕೇಶವನ ಬ್ರಹ್ಮ ರಥೋತ್ಸವ ಜಾತ್ರಾ ಮಹೋತ್ಸವವು ಪ್ರತಿವರ್ಷವು ನಿರಾತಂಕವಾಗಿ ಇಲ್ಲಿಯವರೆಗೂ ನಡೆದುಕೊಂಡು ರಥೋತ್ಸವ ಪ್ರಾರಂಭಕ್ಕು ಮುನ್ನ ಬೇಲೂರು ತಾಲ್ಲೂಕಿನ ದೊಡ್ಡಮೇ ದೂರು ಗ್ರಾಮದ ಮುಸ್ಲಿಂ ಖಾಜಿ ರವರು ರಥದ ಮುಂಭಾಗ ಮುಜರೆವಂದನೆ ಮಾಡಿಕೊಂಡು ಭಾವೈಕ್ಯತೆಯ ಸಂದೇಶ ಸಾರುತ್ತಿರುವುದು ಇಡೀ ವಿಶ್ವಕ್ಕೆ ತಿಳಿದ ವಿಷಯವಾಗಿದೆ ಆದರೆ ಇತ್ತೀಚೆಗೆ ಬೇಲೂರು ತಾಲ್ಲೂಕಿಗೆ ರಾಜಕೀಯ ಮಾಡುವ ಸಲುವಾಗಿ ಬಂದು ಹಿಂದು ಸಂಘಟನೆಗಳ ಹೆಸರಿನಲ್ಲಿ ಸರ್ವ ಧರ್ಮಗಳ ಜನರ ಭಾವನೆಗಳಿಗೆ ದಕ್ಕೆ ತಂದು ತಮ್ಮ ಸ್ವಹಿತಾಸಕ್ತಿಗಾಗಿ ಚನ್ನಕೇಶವನ ಭಕ್ತರ ಭಾವನೆಗಳಿಗೆ ದಕ್ಕೆ ಬರುವಂತೆ ಶ್ರೀ ಚನ್ನಕೇಶವನನ್ನು ದಾಸ್ಯದಿಂದ ಮುಕ್ತಗೊಳಿಸಲು ಬನ್ನಿ. ಹಿಂದು ಬಾಂಧವರೆ ಎಂದು ಕರಪತ್ರಗಳನ್ನು ಬೇಲೂರಿನ ಜನತೆಗೆ ಹಂಚುವುದರ ಜೊತೆಗೆ ಮುಂಬರುವ ರಥೋತ್ಸವದಲ್ಲಿ ರಥದ ಮುಂದೆ ಮುಜರ ವಂದನೆ ಪಠಣ ಮಾಡಬಾರದೆಂದು ಪ್ರತಿಭಟನೆ ಸಹ ನಡೆಸಿರುತ್ತಾರೆ ಆ ಕಾರಣ ಚನ್ನಕೇಶವ ದೇವರನ್ನು ದಾಸ್ಯದಿಂದ ಬಿಡಿಸೊಣ ಬನ್ನಿ ಎಂಬ ಹೇಳಿಕೆಯು ಕೇಶವನ ಸದ್ಭಕ್ತರ ಭಾವನೆಗಳಿಗೆ ತಿವ್ರ ದಕ್ಕೆಯುಂಟಾಗಿದ್ದು ತಾಲ್ಲೂಕಿನ ಜನತೆ ಶಾಂತಿಪ್ರಿಯರಾಗಿದ್ದು ಸರ್ವಧರ್ಮ ಸಹಿಷ್ಣುಗಳು ಆಗಿರುವುದರಿಂದ ಈ ಶಾಂತಿ ಕದಡುವವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಪ್ರಗತಿ ಪರ ಸಂಘಟನೆಗಳು ಸೇರಿ ಶಾಂತಿಗಾಗಿ ಸೌರ್ಹದಯುತ ನಡಿಗೆ ಜಾಥವನ್ನು ನಡೆಸಲಾಗಿದೆ ಎಂದರು.
ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬೇಲೂರಿನಲ್ಲಿ ಜಾತಿಗಳ ನಡುವೆ ಕಲಕುವಂತೆ ಕೆಲಸ ಮಾಡುತ್ತಿರುವ ಸಂಶೋಧಕ ಶ್ರೀವತ್ಸ ಎಸ್ ವಟಿ ಹಾಗೂ ಸಂತೋಷ್ ಕೆಂಚಂಬ ಇವರಿಬ್ಬರನ್ನು ಗಡಿಪಾರು ಮಾಡಬೇಕು ಇಲ್ಲದಿದ್ದರೆ ತಾಲೂಕ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಯಾವುದೇ ಐತಕರ ಘಟನೆ ನಡೆಯದತೆ ಸಿಪಿಐ ರವಿಕಿರಣ್, ಶ್ರೀಕಾಂತ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದ ಬಸ್ ಕಲ್ಪಿಸಲಾಗಿತ್ತು.
ಕರವೇ ನಾರಾಯಣ ಗೌಡ ಬಣದ ಅಧ್ಯಕ್ಷ ಚಂದ್ರಶೇಖರ್, ರಾಜ್ಯ ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್, ಜಯಕರ್ನಾಟಕ ಸಂಘದ ಅಧ್ಯಕ್ಷ ರಾಜು, ಮಾನವ ಹಕ್ಕು ಹೋರಾಟ ನಿಂಗರಾಜು, ದಲಿತ ಸಂಘರ್ಷ ಸಮಿತಿಯ ಧರ್ಮಯ್ಯ, ವೀರಕನ್ಬಡಿಗ ಟಿಪ್ಪು ಸೇನೆಯ ನೂರ್ ಅಹಮದ್ ಟಿಫ್ಪು ಸಂಘರ್ಷ ಸಮಿತಿ ಜಾಕೀರ್ ಪಾಷಾ ಸವಿತಾ ಸಮಾಜದ ಕೋಟೆ ಪ್ರಕಾಶ್, ಮುಖಂಡರಾದ ಬಿ.ಎಲ್.ಧರ್ಮೇಗೌಡ, ವೆಂಕಟೇಶ್, ಪುರಸಭಾ ಮಾಜಿ ಸದಸ್ಯ ಜುಬೇರ್, ಮುಸ್ಲಿಂ ಬಾಂಧವರು ಹಾಜರಿದ್ದರು.