ಹಾಸನ: ಮುಂದೆ ನಡೆಯುವ ವಿಧಾನಸಭಾ ಚುನಾವಣೆಯ ದಿನಾಂಕವು ಈಗಾಗಲೇ ದಿನಾಂಕ ನಿಗಧಿಯಾಗಿದ್ದು, ಈ ವೇಳೆ ಯಾವ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕ ಕ್ರಮವಾಗಿ ಜಿಲ್ಲೆಯ ಮುಖ್ಯ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳ ನಿರ್ಮಿಸಿ ಪೊಲೀಸ್ ಸಿಬ್ಬಂದಿ ಮತ್ತು ರೆವಿನ್ಯೂ ಸಿಬ್ಬಂದಿಗಳನ್ನು ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಅಳವಡಿಸಲಾಗಿತ್ತು. ಈಗ ಎಲ್ಲ ಕಡೆ ಇಬ್ಬರೂ ಪೊಲೀಸರು ಜೊತೆಗೆ ಇಬ್ರು ರೆವಿನ್ಯೂ ಸಿಬ್ಬಂದಿಗಳಿದ್ದಾರೆ.
ಬರುವಂತಹ ದಿನಗಳಲ್ಲಿ ನಾಲ್ಕು ಜನ ಪೊಲೀಸರನ್ನು ಚೆಕ್ ಪೋಸ್ಟ್ ಗಳಿಗೆ ಹಾಕಲಾಗುವುದು. ಈಗಾಗಲೇ ಚೆಕ್ ಪೋಸ್ಟ್ ಗಳಲ್ಲಿ ಅನೇಕ ಅಕ್ರಮ ಹಣ, ಮದ್ಯ ಸಾಗಾಣಿಕೆ ಮಾಡುವಾಗ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ವೇಳೆಯಲ್ಲಿ ಪ್ರತಿ ಗಡಿ ಭಾಗದಲ್ಲಿ ಪೊಲೀಸ್ ಮತ್ತು ರೆವಿನ್ಯೂ ಸಿಬ್ಬಂದಿ ಪರಿಶೀಲಿಸಿ ವಾಹನವನ್ನು ಚುನಾವಣೆ ಆಯೋಗದ ಪ್ರಕಾರ ೫೦ ಸಾವಿರಕ್ಕಿಂತ ಹೆಚ್ಚು ಹಣವನ್ನು ಕೈಲಿ ಇಟ್ಟುಕೊಂಡು ಪ್ರಯಾಣ ಮಾಡುವಂತಿಲ್ಲ. ಹಣ ಮತ್ತು ಇತರೆ ಸಾಗಾಣಿಕೆ ಮಾಡಲಾಗುತ್ತಿದ್ದರೇ ಅದಕ್ಕೆ ಸರಿಯಾದ ದಾಖಲಾತಿ ಕೊಟ್ಟು ಸಾಗಬಹುದಾಗಿದೆ.
ತನಿಖೆ ವೇಳೆ ಪ್ರತಿಯೊಬ್ಬರೂ ಶಾಂತಿಯಿಂದ ಸಹಕರಿಸಬೇಕು ಎಂದರು. ಏಪ್ರಿಲ್ ೧೫ ರಿಂದ ಚೆಕ್ ಪೋಸ್ಟ್ ಗಳನ್ನು ಇನ್ನಷ್ಟು ಗಟ್ಟಿ ಮಾಡಲು ಸಿಬ್ಬಂದಿ ನೇಮಿಸಲಾಗುವುದು ಎಂದರು.