News Karnataka Kannada
Sunday, April 28 2024
ಹಾಸನ

ಅರಸೀಕೆರೆ: ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಹೊಟ್ಟೆ ತುಂಬಿದೆ- ಸಿಎಂ ಇಬ್ರಾಹಿಂ

Arasikere: MLA K.M. Shivalingegowda's stomach is full, says CM Ibrahim
Photo Credit : News Kannada

ಅರಸೀಕೆರೆ: ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಹೊಟ್ಟೆ ತುಂಬಿದೆ ಅವರು ಚುನಾವಣೆಗೆ ನಿಲ್ಲುತ್ತಾರೋ ಇಲ್ಲ ಎಂಬುದು ಸ್ಪಷ್ಟವಾಗಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಪಟ್ಟಣದಲ್ಲಿ ಇಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಹಾಸನ ವಿಧಾನ ಸಭಾ ಕ್ಷೇತ್ರಕ್ಕೆ ಭವಾನಿ ರೇವಣ್ಣ ಮತ್ತು ಮಾಜಿ ಶಾಸಕರ ಮಗ ಸ್ವರೂಪ್ ಟಿಕೇಟು ಕೇಳುವುದರಲ್ಲಿ ತಪ್ಪಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅರಸೀಕೆರೆ ಶಾಸಕ ಶಿವಲಿಂಗೇ ಗೌಡ ಪಕ್ಷ ತೊರೆಯೊ ವಿಚಾರ ಮಾರ್ಮಿಕವಾಗಿ ಉತ್ತರ ನೀಡಿದ ಇಬ್ರಾಹಿಂ ಅವರದು ಮೊದಲು ಹೆರಿಗೆ ಆಗಲಿ ಆಮೇಲೆ ನೋಡೋಣ ಎಂದರು.

ಕಾಂಗ್ರೆಸ್ ಹಾಗೂ ಬಿಜೆಪಿ ಪಟ್ಟಿ ನೋಡಿಕೊಂಡು ಆನಂತರ ನಾವು ಎರಡನೆ ಪಟ್ಟಿ ಬಿಡುಗಡೆ ಮಾಡುತ್ತೇವೆ. ಜೆಡಿಎಸ್ ಎರಡನೆ ಪಟ್ಟಿ ಸದ್ಯಕ್ಕೆ ರಿಲೀಸ್ ಇಲ್ಲಾ ಎನ್ನೋದನ್ನ ಸೂಚ್ಯವಾಗಿ ಹೇಳಿದರು.

ನಾವು ೯೩ ಕ್ಷೇತ್ರದ ಟಿಕೇಟ್ ಬಿಡುಗಡೆ ಮಾಡಿದ್ದೇವೆ ಕಾಂಗ್ರೆಸ್ ನವರು ಐವತ್ತು ಟಿಕೆಟ್ ಅನೌನ್ಸ್ ಮಾಡಲಿ ಎಂದು ಸವಾಲು ಹಾಕಿದರು.

ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಯಾವುದೇ ಗೊಂz ಲ ಇಲ್ಲ. ಪಕ್ಷದ ಬಗ್ಗೆ ಆಗಲಿ, ಸಿಎಂ ಅಭ್ಯರ್ಥಿ ಬಗ್ಗೆ ಆಗಲಿ ಗೊಂದಲ ಇದೆಯಾ ಯಾವುದು ಇಲ್ಲ. ಕಾಂಗ್ರೆಸ್ ನಲ್ಲಿ ಬಿಜೆಪಿಯ ಲ್ಲಿ ಸಿಎಂ ಅಭ್ಯರ್ಥಿ ಯಾರೆಂದು ಹೇಳಲಿ. ನಾವು ಗಂಡು ಮಕ್ಕಳು , ರೈತರ ಮಕ್ಕಳು ನಮ್ಮ ಸಿಎಂ ಕುಮಾರಸ್ವಾಮಿ ಅಂತಾ ಘೋಷ ಣೆ ಮಾಡಿದ್ದೇವೆ. ಗೊಂದಲ ಇದೆ ಎನ್ನೊದು ಕೇವಲ ಕಲ್ಪನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿರುವಂತೆ ಟಿಕೇಟ್ ತೀರ್ಮಾನವನ್ನು ನಾನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರ ಸ್ವಾಮಿ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತವೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದ ವಿವಿಧ ಕ್ಷೇತ್ರಗಳ ೧೩೪ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ ದಿನಾಂಕ ೧೨ ರಂದು ಸಭೆ ಮಾಡಿ ಉಳಿದ ಪಟ್ಟಿಯನ್ನು ಅಂತಿಮಗೊಳಿಸಲಾ ಗುತ್ತದೆ ಎಂದು ಉತ್ತರಿಸಿದರು.

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಅವರ ಸಹೋದ ರರಲ್ಲಿ ಯಾವುದೇ ಕಾರಣಕ್ಕು ಬಿನ್ನಾಭಿಪಾಯ ಬರಲ್ಲಿ ಈ ಕುಟುಂಭವನ್ನು ಸುಮಾರು ೪೦ ವರ್ಷಗಳಿಂದ ನೋಡುತ್ತಿದ್ದೆನೆ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು