ಚನ್ನರಾಯಪಟ್ಟಣ: ಕೆ.ಎಸ್ ಆರ್ಟಿ ಬಸ್ನಲ್ಲಿ ಮೊಬೈಲ್ ಬಿಟ್ಟು ಇಳಿದಿದ್ದ ಪ್ರಯಾಣಿಕರೊ ಬ್ಬರಿಗೆ ಸಾರಿಗೆ ಸಿಬ್ಬಂದಿ ಮೊಬೈಲ್ ಹಿಂತಿರುಗಿಸಿ, ಪ್ರಾಮಾಣಿಕತೆ ಮೆರೆದ ಘಟನೆ ಹಾಸನ ವಿಭಾಗದ ಚನ್ನರಾಯಪಟ್ಟಣ ಬಸ್ನಿಲ್ದಾ ಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣ-ಶ್ರವಣ ಬೆಳಗೊಳ ಬಸ್, ಜ.೧೯ರಂದು ಚನ್ನರಾಯಪಟ್ಟಣ ಹೊರಟಿತು. ಬಸ್ಸಿನಲ್ಲಿ ಬಸ್ತಿಹಳ್ಳಿ ಮೂಲದ ಸೋಮೇಶ್ ಪ್ರಯಾಣಿಸುತ್ತಿ ದ್ದರು. ಬಸ್ತಿಹಳ್ಳಿ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ೧೫೦೦೦ ರೂ ಮೌಲ್ಯದ ಸ್ಮಾರ್ಟ್ ಫೋನ್ ಬಿಟ್ಟು ಇಳಿದಿದ್ದಾರೆ.
ಬಸ್ ಮುಂದೆ ಶ್ರವಣಬೆಳಗೊಳಕ್ಕೆ ಹೋಗಬೇಕಿದ್ದರಿಂದ ಅಲ್ಲಿಗೆ ತೆರಳಿದೆ ಶ್ರವಣಬೆಳಗೊಳಕ್ಕೆ ಬಂದ ಬಸ್ನ ನಿರ್ವಾಹಕ ಜಗತ್ಕುಮಾರ್ಗೆ ೧೫೦೦೦ ರೂ ಮೌಲ್ಯದ ಫೋನ್ ದೊರೆ ತಿದೆ. ಚಾಲಕ ಹರೀಶ್ನೊಂದಿಗೆ ಸೇರಿ ಮೊಬೈಲ್ ಫೋನ್ನ್ನು ಘಟಕ ವ್ಯವಸ್ಥಾಪಕಿ ಶಾಜೀಯ ಭಾನು ಅವರಿಗೆ ಒಪ್ಪಿಸಿದ್ದಾರೆ.
ಮೊಬೈ ಲ್ ಬಿಟ್ಟು ಮನೆಗೆ ತೆರಳಿದ-ಅವರಿಗೆ ಕೆಲ ಹೊತ್ತಿನ ನಂತರ ತಮ್ಮ ಮೊಬೈಲ್ ಫೋನ್ ಇಲ್ಲದ್ದು ಗಮನಕ್ಕೆ ಬಂದು ಹುಡುಕಾಟ ನಡೆಸಿದ್ದಾರೆ. ನಂತರ ತಮ್ಮ ಮೊಬೈಲ್ ಫೋನ್ ಕರೆ ಮಾಡಿದಾಗ ಮೊಬೈಲ್ ಸಿಕ್ಕ ಬಗ್ಗೆ ಘಟಕ ವ್ಯವಸ್ಥಾಪಕರು ತಿಳಿಸಿ ಘಟಕಕ್ಕೆ ಬಂದು ತೆಗೆದುಕೊಳ್ಳಲು ತಿಳಿಸಿ ಸೋಮೇಶ್ ಗೆ ಫೋನ್ ಹಸ್ತಾಂತರಿಸಿದರು.