News Karnataka Kannada
Sunday, May 05 2024
ಹಾಸನ

ಸ್ವರೂಪ್ ಪರ ಪ್ರಚಾರ ಆರಂಭಿಸಿದ ರೇವಣ್ಣ- ಭವಾನಿ ರೇವಣ್ಣ

Bhavani Revanna- Revanna start campaigning for Swaroop
Photo Credit : News Kannada

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ ಪ್ರಕಾಶ್ ಪರ ಇಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಅಧಿಕೃತವಾಗಿ ಪ್ರಚಾರ ಆರಂಭಿಸಿದರು.

ನಗರದ ನೀರು ಬಾಗಿಲು ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ವಿಶೇಷವಾಗಿ ನಿರ್ಮಾಣ ಮಾಡಲಾಗಿರುವ ಜೆಡಿಎಸ್ ಪಕ್ಷದ ವಾಹನದಲ್ಲಿ ಪ್ರಚಾರ ಆರಂಭಿಸಿದ ಅಭ್ಯರ್ಥಿ ಸ್ವರೂಪ್ ಅವರಿಗೆ ಭವಾನಿ ರೇವಣ್ಣ, ಎಚ್ ಡಿ ರೇವಣ್ಣ, ಕೆ.ಎಂ ರಾಜೇಗೌಡ, ಸಿ.ಆರ್ ಶಂಕರ್, ಅಕ್ಬರ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್ ದ್ಯಾವೇಗೌಡ ,ಲೊಕೇಶ್ ಅಟ್ಟಾವರ, ವಕೀಲ ಯೋಗೀಶ್ ಸೇರಿದಂತೆ ಇತರೆ ನಾಯಕರು ಸಾಥ್ ನೀಡಿದರು.

ರ್‍ಯಾಲಿ ವೇಳೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗಿ ಯಾಗಿದ್ದರು . ಈ ಸಂದರ್ಭದಲ್ಲಿ ಮಾತನಾಡಿದ ಭವಾನಿ ರೇವಣ್ಣ ಅವರು ಹಾಸನ ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.

ನೂರಾರು ಕೋಟಿಗಳ ವೆಚ್ಚದಲ್ಲಿ ಇಂಜಿನಿಯರಿಂಗ್ ಕಾಲೇಜು, ಡಿಪ್ಲೋ ಮೋ ಕಾಲೇಜು, ಸರ್ಕಾರಿ ಮಕ್ಕಳ ಆಸ್ಪತ್ರೆ,ಹೈಟೆಕ್ ಆಸ್ಪತ್ರೆ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದ ಕೀರ್ತಿ ಜೆಡಿಎಸ್ ಆಡಳಿತದಲ್ಲಿ ಸಲ್ಲುತ್ತದೆ ಎಂದರು.

ಬಿಜೆಪಿ ಆಡಳಿತದಂತೆ ನಗರದಲ್ಲಿ ಮಳೆಗಾಳಿಗೆ ಬೀಳುವಂತಹ ತಗಡಿನ ಕಾಮಗಾರಿಗಳನ್ನು ಜೆಡಿಎಸ್ ಅಧಿಕಾರ ವಧಿಯಲ್ಲಿ ಮಾಡಿಲ್ಲ; ಹಾಸನ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಹಾಗೂ ಹಾ ಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ವರೂಪ್ ಪ್ರಕಾಶ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಆಂಜನೇಯ ದೇವಾಲ ಯದಿಂದ ಆರಂಭಗೊಂಡ ರ್‍ಯಾಲಿಯು ಎನ್ ಆರ್ ವೃತ್ತದ ಮೂಲಕ ಸಂಚರಿಸಿ ಹೇಮಾವತಿ ಪ್ರತಿಮೆ ನಂತರ ,ಆರ್‌ಸಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸ್ವರೂಪ್ ಪರ ಮತಯಾಚನೆ ಮಾಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು