ಬೇಲೂರು: ಭಕ್ತರ ಆರಾಧ್ಯ ದೈವ ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಮುಸ್ಲಿಂ ಖಾಜಿಗಳಿಂದ ನಡೆಯುವ ಕರಾನ್ ಪಠಣವನ್ನು ವಿರೋಧಿಸಿ ಮಾ.೨೮ರ ಮಂಗಳವಾರ ಬೆಳಿಗ್ಗೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ವಿಭಾಗ ಕಾರ್ಯದರ್ಶಿ ಮಹಿಪಾಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೯೦೦ ವರ್ಷಗಳ ಗತಿ ಇತಿಹಾಸವನ್ನು ಹೊಂದಿರುವ ಚನ್ನಕೇಶವ ದೇಗುಲದ ಮೇಲೆ ಬಹು ಹಿಂದಿನಿಂದ ಇಲ್ಲಿನ ಸಾಂಸ್ಕೃತಿಕ ಆಚರಣೆ ಮೇಲೆ ದಾಳಿ ನಡೆಯುತ್ತಿದೆ. ಮುಂದುವರೆದಂತೆ ಸದ್ಯ ೧೯೩೨ ರಚಿಸಿದ ದೇಗುಲದ ಮ್ಯಾನುವಲ್ ನಲ್ಲಿ ಕೂಡ ಉಲ್ಲೇಖವಾಗಿದೆ. ಇದ್ದರಿಂದ ಇಸ್ಲಾಮಿಕ ಪಿತೂರಿ ಎದ್ದು ಕಾಣುತ್ತದೆ ಎಂದ ಅವರು ಹಿಂದೂಗಳ ದೇವಾಲಯಕ್ಕೆ ಸರ್ವ ಧರ್ಮೀಯರು ಕೂಡ ಬಂದು ಕೈಮುಗಿಬಹುದು, ಆದರೆ ಕರಾನ್ ಪಠಣದ ಮೂಲಕ ಅಲ್ಲಾ ಒಬ್ಬನೇ ದೊಡ್ಡ ದೇವರು ಎಂದು ಚನ್ನಕೇಶವನಿಗೆ ಅಗೌರವ ನೀಡುವುದನ್ನು ನಾವುಗಳು ಖಂಡಿಸುತ್ತವೆ ಈ ಕಾರಣದಿಂದ ಮಾರ್ಚ ೨೮ ರಂದು ಪಟ್ಟಣದ ಬಸವೇಶ್ವರ ವೃತ್ತದಿಂದ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಹಾಗೂ ಇನ್ನು ಮುಂತಾದ ಕಾರ್ಯಕರ್ತರು ಹೊರಟು ಚನ್ನಕೇಶವಸ್ವಾಮಿ ದೇಗುಲದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಬೇಲೂರು ಶಾಂತಿಪ್ರಿಯ ಊರು ಇಲ್ಲಿನ ಸಾಮರಸ್ಯವನ್ನು ಹಾಳು ಮಾಡುವುದು ನಮಗೆಲ್ಲ, ನಮಗೆ ನ್ಯಾಯ ಬೇಕಿದೆ ಶಾಂತಿಯಿಂದಲೇ ಪ್ರತಿಭಟನೆ ನಡೆಸುವ ಬಗ್ಗೆ ಸ್ಪಷ್ಟನೆ ನೀಡಿದರು.
ಇತಿಹಾಸ ಸಂಶೋದಕ ಡಾ.ಎನ್.ರಮೇಶ್ ಮಾತನಾಡಿ, ಬೇಲೂರು ಚನ್ನಕೇಶವ ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣದ ವಿಚಾರವಾಗಿ ಕಳೆದ ೨ ವರ್ಷದಿಂದ ತೀವ್ರ ಸಂಶೋಧನೆ ನಡೆಸಿದ ಫಲದಿಂದ ಇಲ್ಲಿನ ಮ್ಯಾನುವಲ್ನಲ್ಲಿ ಇಸ್ಲಾಮಿಕ ಪಿತೂರಿ ಕಾಣುತ್ತದೆ. ಈ ಹಿನ್ನಲೆಯಲ್ಲಿ ದೇಗುಲದ ಮ್ಯಾನುವಲ್ ಪುನರ್ ರಚನೆಯಾಗಬೇಕು ಮತ್ತು ಸಂಪ್ರದಾಯದ ಹೆಸರು ಹೇಳಿಕೊಂಡು ಯಾವ ಕಾರಣಕ್ಕೂ ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು ಎಂದು ನಾಳಿನ ಪ್ರತಿಭಟನೆಯಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಬೇಲೂರಿನ ಸಂಶೋಧಕ ಡಾ.ಶ್ರೀವತ್ಸ ಎಸ್ ವಟಿ ರವರು ತಮ್ಮ ಬೇಲೂರಿನ ಮೇಲೆ ಹೊಸ ಬೆಳಕು ಎಂಬ ಪುಸ್ತಕದಲ್ಲಿ ಮುಜುರೆ ಬಗ್ಗೆ ಶಾಸನದ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಬೇಲೂರು ದೇಗುಲದ ಗೋಪುರದ ಕಲಸ ನಾಲ್ಕು ಭಾರಿ ಜೀರ್ಣ್ಣಾದ್ಧಾರಗೊಳಿಸಲಾಗಿದೆ. ಹೈದರಾಲಿ ಕಾಲದಲ್ಲಿ ನಡೆದ ಕಲಶ ಜೀರ್ಣ್ಣಾದ್ದಾರ ನಿಜಕ್ಕೂ ನಂಜ ಅರಸು ಇವರಿಗೆ ಸಲ್ಲುತ್ತದೆ ಎಂದು ಸ್ಪಷ್ಟೀಕರಣ ಕೊಟ್ಟರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಜರಂಗ ದಳ ಕಾರ್ಯದರ್ಶಿ ನಾಗೇಶ್, ಸಂಶೋಧಕ ಡಾ.ಶ್ರೀವತ್ಸ ಎಸ್ ವಟಿ, ಜಿಲ್ಲಾ ಸಂಚಾಲಕ ಸಂಜಯ್ ಹಾಜರಿದ್ದರು.