ಹಾಸನ : ನಗರದಲ್ಲಿ ಉಂಟಾಗಿರುವ ಹಿಜಾಬ್- ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ದೃಷ್ಠಿಯಲ್ಲಿ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ಸರ್ಕಾರದ ಆದೇಶದಂತೆ ಶಾಲೆಗಳು ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ನಗರದಲ್ಲಿ ಹಿಜಾಬ್- ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಯಾವುದೇ ಅಹಿತಕರ ಚಟುವಟಿಕೆ ಘಟನೆಗಳು ಜಿಲ್ಲೆಯಲ್ಲಿ ನಡೆಯದಂತೆ ಕಟ್ಟೆಚರ ವಹಿಸಲು ಸಾರ್ವಜನಿಕರಿಗೆ ನಂಬಿಕೆ ಮೂಡಿಸುವ ಸಲುವಾಗಿ ಹಾಸನ ನಗರ ಡಿವೈಎಸ್ಪಿ ಉದಯ ಭಾಸ್ಕರ್ ನೇತೃತ್ವದಲ್ಲಿ ರಿಂಗ್ ರಸ್ತೆ, ನಗರದ ಎನ್.ಆರ್.ವೃತ್ತ, ಪೆನ್ಸನ್ ಮೊಹಲ್ಲಾ, ಮಾರ್ಕೆಟ್, ಹಳೆಬಸ್ಸು ನಿಲ್ದಾಣ, ಎಂ.ಜಿ. ರಸ್ತೆ, ಪೆನಸನ್ ಮೊಹಲ್ಲಾ, ಸ್ಲೇಟರ್ಸ್ ಹಾಲ್, ಎಂ.ಜಿ. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.