News Karnataka Kannada
Monday, April 29 2024
ಹಾಸನ

ಭೀಮನ ಪಾತ್ರದಲ್ಲಿ ಮಿಂಚಿದ ಶಾಸಕ ಶಿವಲಿಂಗೇಗೌಡ

Shivanalinge Gowda
Photo Credit :

ಹಾಸನ : ಅರಸೀಕೆರೆ ತಾಲೂಕಿನ ಪಡುವನಹಳ್ಳಿಯ ಗೊಲ್ಲರ ಹಟ್ಟಿಯಲ್ಲಿ ಕುರುಕ್ಷೇತ್ರ ನಾಟಕ ವೇಳೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭೀಮನ ಪಾತ್ರದ ಡೈಲಾಗ್ ಹೇಳಿ, ಹಾಡು ಹಾಡಿದ್ದಾರೆ.

ಪೌರಾಣಿಕ ನಾಟಕದ ಭೀಮನ ಪಾತ್ರಮಾಡಿ ಶಾಸಕ ಮಿಂಚಿದ್ದಾರೆ. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ರಿಂದ ಭೀಮನ ಪಾತ್ರದ ಡೈಲಾಗ್ ಹಾಗು ಹಾಡಿಗೆ ಜನರು ಫಿದಾ ಆಗಿದ್ದಾರೆ. ಇಲ್ಲಿ ಕುರುಕ್ಷೇತ್ರ ನಾಟಕ ನಡೆದಿತ್ತು. ನಾಟಕ ಉದ್ಘಾಟನೆಗೆ ಶಿವಲಿಂಗೇಗೌಡ ತೆರಳಿದ್ದರು. ಈ ವೇಳೆ, ಸ್ವತಃ ಶಾಸಕರೂ ನಾಟಕದ ಪಾತ್ರದ ಸಂಭಾಷಣೆ ಹೇಳಿದ್ದಾರೆ.

ಕೈಯಲ್ಲಿ ಗದೆ ಹಿಡಿದು ಕೌರವರ ಸಂಹಾರ ಪ್ರತಿಜ್ಞೆ ಮಾಡೋ ಸನ್ನಿವೇಶದ ಡೈಲಾಗ್ ಹಾಗು ಹಾಡು ಹೇಳಿ ಮಿಂಚಿದ್ದಾರೆ. ಶಾಸಕರ ಅಭಿನಯಕ್ಕೆ ಸಿಳ್ಳೆ ಚಪ್ಪಾಳೆಗಳ ಮೂಲಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದೆ ನಾನೂ ಪೌರಾಣಿಕ ನಾಟಕದಲ್ಲಿ ಭೀಮನ ಪಾತ್ರ ಮಾಡುತ್ತಿದ್ದೆ ಎಂದು ಹಳೆಯ ದಿನ ಮೆಲುಕು ಹಾಕಿ ಅಭಿನಯ ಮಾಡಿ ತೋರಿಸಿದ್ದಾರೆ. ಸದನದಲ್ಲಿ ತಮ್ಮ ಸ್ವಾರಸ್ಯಕರ ಮಾತಿನಿಂದ ಗಮನ ಸೆಳೆಯೋ ಶಾಸಕ, ಸದನದಲ್ಲೂ ಸೈ ನಾಟಕದ ಅಭಿನಯಕ್ಕೂ ಸೈ ಎಂದು ಮಿಂಚಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು