ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಪಚ್ಚೇಗೌಡನದೊಡ್ಡಿ ಗ್ರಾಮದ ರೈತರ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಬಿರುಗಾಳಿಸಹಿತ ಮಳೆಗೆ ನೆಲಕಚ್ಚಿದ್ದು ದೊಮ್ಮನಗದ್ದೆ ಗ್ರಾಮದ ಶಿವರಾಜ್ ಎಂಬುವವರ ಮನೆಯ ಮೇಲ್ಚಾವಣಿ ಗಾಳಿಗೆ ತೂರಿ ಹೋಗಿಹೋಗಿದೆ.
ಸಮೀಪದ ಪಚ್ಚೆಗೌಡನದೊಡ್ಡಿ ಗ್ರಾಮದ ರೈತ ಸಂಪತ್ ಕುಮಾರ್ ತಮ್ಮ ಜಮೀನಿನ 3500 ನೇಂದ್ರ ಬಾಳೆ ಭಾರಿ ಬಿರುಗಾಳಿಗೆ ನೆಲಕಚ್ಚಿದೆ ಜೊತೆಗೆ ರವಿಕುಮಾರ್ ಎಂಬ ರೈತರ ಜಮೀನಿನಲ್ಲಿ 1500 , ರಾಜೇಂದ್ರ ಎಂಬ ರೈತರ ಜಮೀನಿನಲ್ಲಿ 1800 ಬಾಳೆ ಮಾದೇಗೌಡ ರೈತ ಬೆಳೆದಿದ್ದ ನೇಂದ್ರ ಬಾಳೆ 1000 ಜೊತೆಗೆ ಚಿಗತಾಪುರ ಗ್ರಾಮದ ರಂಗಸ್ವಾಮಿ 1,500 ನೇಂದ್ರ ಬಾಳೆ ಭಾರಿ ಬಿರುಗಾಳಿಗೆ ಸಿಲುಕಿ ನೆಲಕಚ್ಚಿದ್ದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯುಂಟಾಗಿದೆ.
ರೈತರ ಜಮೀನುಗಳಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ಬಿಳುಗಾರಿಗೆ ಸಿಲುಕಿ ಸಂಪೂರ್ಣವಾಗಿ ಬೆಳೆ ಹಾನಿ ಆಗಿರುವುದರಿಂದ ಸಂಬಂಧಪಟ್ಟ ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗಾಗಿರುವ ನಷ್ಟದ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.