ಚಾಮರಾಜನಗರ: ಸದಾ ಗಜಕಾಟದಿಂದ ಬೇಸತ್ತಿರುವ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದ ರೈತರು ಆನೆ ಹಾವಳಿ ನಿಯಂತ್ರಣ ಮಾಡಲು ಆಗದಿದ್ದರೆ ವಿಷ ಕುಡಿದು ಸಾಯಬೇಕಾಗುತ್ತದೆ ಇದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ವನ್ಯಜೀವಿ ವಲಯದ ಮಂಚಹಳ್ಳಿ ಗ್ರಾಮದ ರೈತರು ಆನೆದಾಳಿಯಿಂದ ತತ್ತರಿಸಿಹೋಗಿದ್ದು ಬಾರಿ ನಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ನಿತ್ಯ ರೈತರ ಜಮೀನಿಗೆ ಲಗ್ಗೆಯಿಡುವ ಕಾಡಾನೆಗಳು ಪಸಲನ್ನ ನಾಶಪಡಿಸುವುದಲ್ಲದೆ ಸೋಲಾರ್ ತಂತಿ ಬೇಲಿಯನ್ನು ಸಂಪೂರ್ಣವಾಗಿ ಜಖಂಗೊಳಿಸಿವೆ ಇದರಿಂದ ರೈತರಿಗೆ ಬೆಳೆ ನಷ್ಟದ ಜೊತೆ ಸೋಲಾರ್ ತಂತಿ ಬೇಲಿ ನಾಶದಿಂದ ಲಕ್ಷಾಂತರ ರೂ ನಷ್ಟವಾಗಿದೆ. ಸತತ ಕಾಡಾನೆಗಳ ದಾಳಿಯಿಂದ ರೈತರು ಮಾನಸಿಕವಾಗಿ ಕುಗ್ಗಿಹೋಗಿದ್ದು ಫಸಲು ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರಾತ್ರಿ ಗಸ್ತು ಹೆಚ್ಚಿಸುವ ಜೊತೆ ರೈಲ್ವೆ ಕಂಬಿ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.