News Karnataka Kannada
Monday, April 29 2024
ಚಾಮರಾಜನಗರ

ಪಿರಿಯಾಪಟ್ಟಣ: ಕಣಗಾಲುನಲ್ಲಿ ಮೂವರು ಕಳ್ಳರ ಬಂಧನ

Thieves
Photo Credit : By Author

ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಕಾವೇರಿ ಮಾತಾ ಮಹಿಳಾ ಟ್ರಸ್ಟ್ ನಲ್ಲಿ ಸುಮಾರು 80 ಸಾವಿರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬೆಟ್ಟದಪುರ ಆರಕ್ಷಕ ಠಾಣೆ ಇನ್ಸ್ ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ ಮತ್ತು ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಣಗಾಲು ಗ್ರಾಮದ ಕೂಲಿ ಕೆಲಸಗಾರರಾದ ಪ್ರದೀಪ್, ಸ್ವಾಮಿ, ಚಂದ್ರ, ಪ್ರವೀಣ್ ಬಂಧಿತ ಆರೋಪಿಗಳು, ಸೆ.26 ರಂದು ಮಹಿಳಾ ಸಂಘದಲ್ಲಿದ್ದ ವೇಯಿಂಗ್ ಮೆಷಿನ್, ಪ್ರೆಸ್ಸಿಂಗ್ ಮಿಷಿನ್, ಗ್ಯಾಸ್ ಸಿಲಿಂಡರ್, ಡ್ರಮ್, ಹಾಗೂ ತೂಕದ ಮೆಷಿನ್ ಸೇರಿದಂತೆ ಕಚೇರಿಯಲ್ಲಿದ್ದ ಹಲವು ವಸ್ತುಗಳನ್ನು ಕಳ್ಳತನ ಮಾಡಿದ್ದರು.

ಈ ವಿಚಾರವಾಗಿ ಟ್ರಸ್ಟ್ ಅಧ್ಯಕ್ಷೆ ಪದ್ಮಮ್ಮ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡು ಅ.11 ರಂದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಕಾರ್ಯಾಚರಣೆಯಲ್ಲಿ ಎಎಸ್ಐ ಸೋಮಶೇಖರ, ಸಿಬ್ಬಂದಿ ದಿಲೀಪ್, ಮಹೇಶ್, ರವೀಶ್, ರಮೇಶ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು