ಚಾಮರಾಜನಗರ: 1.5 ಎಕರೆ ಪ್ರದೇಶದಲ್ಲಿ ಫಸಲಿಗೆ ಬಂದಿದ್ದ ಟೊಮೊಟೋ ಬೆಳೆಯನ್ನು ಕಿಡಿಗೇಡಿಗಳು ನಾಶ ಮಾಡಿರುವ ಘಟನೆ ಹರವೇ ಸಮೀಪದ ಕೆಬ್ಬೆಪುರ ಗ್ರಾಮದಲ್ಲಿ ನಡೆದಿದೆ. ಮಂಜು ಅವರ ಪುತ್ರ ಕರಿಯಪ್ಪ ಎಂಬುವವರು ತಮ್ಮ ಜಮೀನಿನಲ್ಲಿ 1.5 ಎಕರೆಯಲ್ಲಿ ಟೊಮೊಟೋ ಬೆಳೆ ಬೆಳೆದಿದ್ದರು.
ಬುಧವಾರ ಮೊದಲ ಫಸಲನ್ನು ಕ್ಯುಯ್ದು ಮಾರುಕಟ್ಟೆಗೆ ಹಾಕಿ ಸಂತಸದಿಂದ್ದರು. ಆದರೆ ಬುಧವಾರ ರಾತ್ರಿ ಅಪರಿಚಿತ ಕಿಡಿಗೇಡಿಗಳು ಟೊಮೊಟೊ ಬೆಳೆ ಮೇಲೆ ದಾಳಿ ಮಾಡಿದ್ದು, ಟೊಮೊಟೋ ಗಿಡಗಳನ್ನು ಕತ್ತರಿಸಿ ಹಾಳು ಮಾಡಿದ್ದಾರೆ. ಇನ್ನು ಕೆಲವು ಗಿಡಗಳಿಗೆ ಕಟ್ಟಿದ್ದ ತಂತಿಯನ್ನು ಕಿತ್ತುಹಾಕಿ ನೆಲಸಮ ಮಾಡಿ ಬೆಳೆ ನಾಶ ಮಾಡಿದ್ದಾರೆ.
1.5 ಎಕರೆ ಜಮೀನಿನಲ್ಲಿ ಟೊಮೊಟೋ ಗಿಡ ಹಾಕಲು ಮಂಜು ಅವರು ಸುಮಾರು 1 ಲಕ್ಷ ರೂ. ಗಿಂತ ಹೆಚ್ಚು ಖರ್ಚು ಮಾಡಿದ್ದರು. ಆದರೆ ಫಸಲಿಗೆ ಬಂದಿದ್ದ ಟೊಮೊಟೋ ಬೆಳೆ ನಾಶವಾಗಿರುವುದರಿಂದ ಅಂದಾಜು 10 ಲಕ್ಷ ರೂ. ನಷ್ಟವಾಗಿದೆ. ಫಸಲಿಗೆ ಬಂದಿದ್ದ ಬೆಳೆ ನಾಶವಾಗಿರುವುದರಿಂದ ರೈತ ಮಂಜು ಕಂಗಲಾಗಿದ್ದಾರೆ. ಸ್ಥಳಕ್ಕೆ ಬೇಗೂರು ಠಾಣೆಯ ಪಿಎಸ್ಐ ಕಿರಣ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.