ಗುಂಡ್ಲುಪೇಟೆ: ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನನ್ನು ಕಾಡಾನೆ ತುಳಿದು ಸಾಯಿಸಿದ ಘಟನೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ಶಿವಪುರ ಗ್ರಾಮದ ನಿವಾಸಿ ರೈತ ಬೆಳ್ಳಶೆಟ್ಟಿ(55) ಕಾಡಾನೆ ತುಳಿತದಿಂದ ಸಾವನ್ನಪ್ಪಿದ ದುರ್ದೈವಿ. ಬೆಳ್ಳಶೆಟ್ಟಿ ಅವರು ಮಗ ಮಹೇಶ್ ನೊಂದಿಗೆ ರಾತ್ರಿ ಕಡಲೆ ಬೆಳೆಯನ್ನುಕಾಯಲು ಜಮೀನಿಗೆ ತೆರಳಿದ್ದರು. ಬೆಳಗ್ಗಿನ ಜಾವ ಜಮೀನಿನಲ್ಲಿ ಮಲಗಿದ ವೇಳೆ ದಿಢೀರ್ ಧಾವಿಸಿದ ಕಾಡಾನೆಯೊಂದು ಬೆಳ್ಳಶೆಟ್ಟಿ ತಲೆಯ ಮೇಲೆ ಕಾಲಿಟ್ಟು ತುಳಿದಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಗ ಮಹೇಶ್ ಗೂ ಗಾಯವಾಗಿದ್ಸು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸ್ಥಳಕ್ಕೆ ಎ ಸಿಎಫ್ ನವೀನ್, ಆರ್ ಎಫ್ ಓ ನವೀನ್ ಕುಮಾರ್, ಅರಣ್ಯ ಇಲಾಖೆಯಿಂದ ಸಿಎಫ್ ರಮೇಶ್ ಕುಮಾರ್ ಭೇಟಿ ನೀಡಿ ಎರಡು ಲಕ್ಷ ಪರಿಹಾರ ಚೆಕ್ ವಿತರಿಸಿದರು. ಉಳಿದ ಐದೂವರೆ ಲಕ್ಷ ಪರಿಹಾರ ವಿತರಿಸಲಾಗುವುದು ಒಟ್ಟು ಏಳೂವರೆ ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಹುಂಡೀಪುರ ಸುತ್ತಮುತ್ತ ನಾಲ್ಕೈದು ದಿನದ ಹಿಂದೆಯೂ ಕಾಡಾನೆ ದಾಳಿಗೆ ಬೆಳೆ ನಾಶವಾಗಿತ್ತು, ಹುಲಿ ದಾಳಿಗೆ ಕಳೆದ ವರ್ಷ ಇಬ್ಬರು ಸಾವಿಗೀಡಾಗಿದ್ದರು ಅದ್ದರಿಂದ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.