News Karnataka Kannada
Monday, May 13 2024
ಚಾಮರಾಜನಗರ

ಗುಂಡ್ಲುಪೇಟೆ: ಕಾಡಾನೆ ತುಳಿತಕ್ಕೆ ರೈತ ಬಲಿ

ಪ್ರೀತಿಸಿದವರೊಂದಿಗೆ ವಿವಾಹವಾಗದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ನಡೆದಿದೆ.
Photo Credit :

ಗುಂಡ್ಲುಪೇಟೆ: ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನನ್ನು ಕಾಡಾನೆ ತುಳಿದು ಸಾಯಿಸಿದ ಘಟನೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

ಶಿವಪುರ ಗ್ರಾಮದ ನಿವಾಸಿ ರೈತ ಬೆಳ್ಳಶೆಟ್ಟಿ(55) ಕಾಡಾನೆ ತುಳಿತದಿಂದ ಸಾವನ್ನಪ್ಪಿದ ದುರ್ದೈವಿ.  ಬೆಳ್ಳಶೆಟ್ಟಿ ಅವರು ಮಗ ಮಹೇಶ್ ನೊಂದಿಗೆ ರಾತ್ರಿ ಕಡಲೆ ಬೆಳೆಯನ್ನುಕಾಯಲು ಜಮೀನಿಗೆ ತೆರಳಿದ್ದರು. ಬೆಳಗ್ಗಿನ ಜಾವ ಜಮೀನಿನಲ್ಲಿ ಮಲಗಿದ ವೇಳೆ ದಿಢೀರ್ ಧಾವಿಸಿದ ಕಾಡಾನೆಯೊಂದು ಬೆಳ್ಳಶೆಟ್ಟಿ ತಲೆಯ ಮೇಲೆ ಕಾಲಿಟ್ಟು ತುಳಿದಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಗ  ಮಹೇಶ್ ಗೂ  ಗಾಯವಾಗಿದ್ಸು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸ್ಥಳಕ್ಕೆ ಎ ಸಿಎಫ್ ನವೀನ್, ಆರ್ ಎಫ್ ಓ ನವೀನ್  ಕುಮಾರ್,  ಅರಣ್ಯ ಇಲಾಖೆಯಿಂದ ಸಿಎಫ್ ರಮೇಶ್ ಕುಮಾರ್ ಭೇಟಿ ನೀಡಿ ಎರಡು ಲಕ್ಷ ಪರಿಹಾರ ಚೆಕ್ ವಿತರಿಸಿದರು.  ಉಳಿದ ಐದೂವರೆ ಲಕ್ಷ ಪರಿಹಾರ ವಿತರಿಸಲಾಗುವುದು ಒಟ್ಟು ಏಳೂವರೆ ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

 ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಹುಂಡೀಪುರ ಸುತ್ತಮುತ್ತ ನಾಲ್ಕೈದು ದಿನದ ಹಿಂದೆಯೂ ಕಾಡಾನೆ ದಾಳಿಗೆ ಬೆಳೆ ನಾಶವಾಗಿತ್ತು, ಹುಲಿ  ದಾಳಿಗೆ ಕಳೆದ ವರ್ಷ ಇಬ್ಬರು ಸಾವಿಗೀಡಾಗಿದ್ದರು ಅದ್ದರಿಂದ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು