ಚಾಮರಾಜನಗರ: ಕೇಳಿದ್ದಷ್ಟು ಹಣ ನೀಡಿಲ್ಲ ಅಂತ ಚಾಲಕನ ಮೇಲೆ ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ದೈಹಿಕವಾಗಿ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ತಮಿಳುನಾಡು ಗಡಿ ಬಣ್ಣಾರಿ ಚೆಕೋಸ್ಟ್ ನಲ್ಲಿ ನಡೆದಿದ್ದು, ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ತರಕಾರಿ ವಾಹನ ಚಾಲಕರು ತಮಿಳುನಾಡು ಚೆಕ್ಪೋಸ್ಟ್ ಅಧಿಕಾರಿಗಳು ನಮಗೆ ತೊಂದ್ರೆ ಕೊಡ್ತಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕದಿಂದ ಬಣ್ಣಾರಿ ಮಾರ್ಗವಾಗಿ ತಮಿಳುನಾಡಿಗೆ ತೆರಳುವ ತರಕಾರಿ ವಾಹನ ಚಾಲಕರಿಗೆ ಬಣ್ಣಾರಿ ಅರಣ್ಯ ಚೆಕ್ಪೋಸ್ಟ್ ಅಧಿಕಾರಿ ವರ್ಗ ತೊಂದ್ರೆ ನೀಡುವುದಲ್ಲದೆ ಕೇಳಿದ್ದಷ್ಟು ಹಣ ಕೊಡದಿದ್ರೆ ನಿಂದಿಸುವುದಲ್ಲದೆ ದೈಹಿಕವಾಗಿ ಹಲ್ಲೆ ನಡೆಸುತ್ತಾರೆ ಎಂದು ಹೆಸರು ಹೇಳಲಿಚ್ಛಿಸಿದ ಚಾಲಕರೊಬ್ಬರು ನೋವು ತೋಡಿಕೊಂಡಿದ್ದು ನೆನ್ನೆಯಷ್ಟೇ ಬಣ್ಣಾರಿ ಚೆಕ್ಪೋಸ್ಟ್ ಬಳಿ ತರಕಾರಿ ವಾಹನ ಚಾಲಕನ ಮೇಲೆ ಅಧಿಕಾರಿಯೊಬ್ಬರು ದೈಹಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಯೊಬ್ಬ ಚಾಲಕನನ್ನ ಕಚೇರಿ ಒಳಗೆ ಕರೆದೊಯ್ದು ಹಲ್ಲೆ ನಡೆಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.