ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಮಂಚಹಳ್ಳಿ ಗ್ರಾಮದ ರೈತರಿಗೆ ಆನೆಗಳ ಉಪಟಳ ಮಿತಿ ಮೀರಿದ್ದು ನೆನ್ನೆ ರಾತ್ರಿ ಸೋಮಪ್ಪ ಮತ್ತು ಇನ್ನಿಬ್ಬರು ರೈತರ ಜಮೀನಿಗೆ ನುಗ್ಗಿದ ಕಾಡಾನೆ ಸಂಗ್ರಹಿಸಿಟ್ಟಿದ್ದ ಟೂಮೋಟೋವನ್ನ ಸಂಪೂರ್ಣವಾಗಿ ನಾಶಪಡಿಸಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಗೆ ಸೇರಿದ ಮಂಚಹಳ್ಳಿ ಗ್ರಾಮದ ರೈತರಿಗೆ ಆನೆಗಳ ಉಪಟಳ ತಲೆನೋವಾಗಿ ಪರಿಣಮಿಸಿದೆ, ನೆನ್ನೆ ರಾತ್ರಿ ಟೊಮೊಟೊ ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸಲು ಬಾಕ್ಸ್ ಗಳಲ್ಲಿ ಶೇಖರಣೆ ಮಾಡಲಾಗಿತ್ತು ಆದ್ರೆ ಜಮೀನಿಗೆ ನುಗ್ಗಿದ ಕಾಡಾನೆ ರೈತ ಬೆಳೆದಿದ್ದ ತರಕಾರಿಯನ್ನ ನಾಶಪಡಿಸಿ ಹೋಗಿದೆ .
ಗ್ರಾಮದ ಸೋಮಪ್ಪ, ಮಹದೇವಪ್ಪ, ಗುರುಪ್ರಸಾದ್ , ವಿಶ್ವನಾಥ್ ಎಂಬ ರೈತರ ಜಮೀನಿನಲ್ಲಿ ಆನೆ ಅದ್ವಾನ ನಡೆಸಿದೆ, ಕಳೆದ ಎರಡು ವಾರಗಳಿಂದಲೂ ಆನೆ ಉಪಟಳ ಹೆಚ್ಚಾಗಿದ್ರು ಅರಣ್ಯ ಇಲಾಖೆ ಅಧಿಕಾರಿಗಳ ಮೌನಕ್ಕೆ ರೈತರು ಆಕ್ರೋಶಗೊಂಡಿದ್ದಾರೆ. ಈಗಾಗಲೇ ನಾಶ ಆಗಿರೋ ರೈತರ ಬೆಳೆಗೆ ಇಲಾಖೆ ನಷ್ಟ ಬರಿಸಬೇಕು ಹಾಗೂ ಆನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.