ಗುಂಡ್ಲುಪೇಟೆ: ಕೇರಳ ರಾಜ್ಯದಲ್ಲಿ ಕೋವಿಡ್ ಮಹಾಮಾರಿ ಉಲ್ಬಣಗೊಂಡ ಬೆನ್ನಲ್ಲೇ ಇತ್ತ ಗಡಿಭಾಗಗಳಾದ ಕೆಕ್ಕನಹಳ್ಳ ಮತ್ತು ಮೂಲೆಹೊಳೆಯಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ ಚುರುಕುಗೊಂಡಿದ್ದು ಗಡಿಭಾಗದ ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗ್ತಿದೆ.
ಚಾಮರಾಜನಗರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಗಡಿಭಾಗದಲ್ಲಿ ಕರೋಣ ಹೈ ಅಲರ್ಟ್ ಶುರುವಾಗಿದೆ, ಎರಡು ಅಂತರಾಜ್ಯ ಗಡಿಭಾಗಗಳಾದ ಮೂಲೆಹೊಳೆ ಮತ್ತು ಕೆಕ್ಕನಹಳ್ಳ ಚೆಕೋಸ್ಟ್ ನಲ್ಲಿ ತಪಾಸಣೆ ಪ್ರಾರಂಭಿಸೋ ಜೊತೆಗೆ ಕೇರಳ ಗಡಿಗೆ ಹೊಂದಿಕೊಂಡಿರುವ ಮದ್ದೂರು ಕಾಲೋನಿ, ಕಗ್ಗಳದಹುಂಡಿ ಗ್ರಾಮಗಳಲ್ಲಿ ಮನೆ ಮನೆ ಸರ್ವೇ ನಡೆಸಲಾಗಿದೆ.
ನೆಗಡಿ ಕೆಮ್ಮು ಜ್ವರದಿಂದ ಬಳಲುತ್ತಿರುವವರಿಗೆ ಕೋವಿಡ್ ಪರೀಕ್ಷೆ ನಡೆಸುವ ಜೊತೆಗೆ ಕೇರಳ ರಾಜ್ಯದಿಂದ ಬಂದಂತವರು ಸ್ವಯಂ ಕ್ವಾರಂಟೈನ್ ಆಗಲು ಸೂಚನೆ ನೀಡಲಾಗುತ್ತಿದೆ