News Karnataka Kannada
Sunday, May 12 2024
ಚಾಮರಾಜನಗರ

ಚಾಮರಾಜನಗರ: ಸ್ಮಾರಕ, ಶಾಸನ ರಕ್ಷಿಸುವ ಕಾರ್ಯವಾಗಬೇಕು- ಪ್ರಭಾಕರ್

Chamarajanagar: Monuments, inscriptions should be protected: Prabhakar
Photo Credit : By Author

ಚಾಮರಾಜನಗರ: ಇತಿಹಾಸ ಪ್ರಜ್ಞೆ ಪ್ರತಿಯೊಬ್ಬರಿಗೂ ಅವಶ್ಯಕತೆ ಇದ್ದು, ಭಾರತೀಯ ಪುರಾತನ ದೇವಾಲಯಗಳು, ಸ್ಮಾರಕಗಳು ಶಾಸನಗಳನ್ನು ಸಂರಕ್ಷಿಸುವ ಕಾರ್ಯವನ್ನು ಯುವ ಸಮುದಾಯ ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು ಎಂದು ದೇವಾಲಯಗಳ ವಾಸ್ತುತಜ್ಞರು, ಕರ್ನಾಟಕ ಇತಿಹಾಸ ಅಕಾಡೆಮಿಯ ಮೈಸೂರು ಪ್ರಭಾಕರ್ ರವರು ತಿಳಿಸಿದರು.

ಬೆಂಗಳೂರು ಕರ್ನಾಟಕ ಇತಿಹಾಸ ಅಕಾಡೆಮಿ ಶ್ರೀಗಂಧ ಕಂದರ್ಪ ಸಂಶೋಧನಾ ಬಳಗ ಗುಂಡ್ಲುಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಅಮಚವಾಡಿ ಪದವಿ ಪೂರ್ವ ಕಾಲೇಜು, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ, ತಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮ ದಲ್ಲಿ ತಾಲೂಕಿನ ಇತಿಹಾಸ ಪ್ರಸಿದ್ಧ ನರಸಮಂಗಲ ಶ್ರೀರಾಮೇಶ್ವರ ದೇವಾಲಯದಲ್ಲಿ ವಿಶೇಷ ಉಪನ್ಯಾಸ ಹಾಗೂ ದೇವಾಲಯಗಳ ಮಹತ್ವದ ಕುರಿತು ಮಾತನಾಡಿ, ಇತಿಹಾಸ ಸಂಶೋಧಕ ಪವನ್ ಚಕ್ರವರ್ತಿ ಮಾತನಾಡಿ ಚಾಮರಾಜನಗರ ತಾಲೂಕು ನರಸಮಂಗಲ ಶ್ರೀರಾಮೇಶ್ವರ ದೇವಾಲಯ ಗಂಗರ ಕಾಲದಲ್ಲಿ ನಿರ್ಮಿಸಲಾದ ದೇವಾಲಯವಾಗಿದ್ದು ಕಂಬಗಳ ರಚನೆ ಮೂರ್ತಿಗಳ ವಿಶೇಷ ,ಸಪ್ತ ಮಾತೃಕಾ ಶಿಲ್ಪ, ಹೊರಾಂಗಣ ಮತ್ತು ಒಳ ಆವರಣ, ಮೂರ್ತಿ ಶಿಲ್ಪಗಳು, ವಿಮಾನ ಗೋಪುರದ ವಿವರಣೆಯನ್ನು, ಶಾಸನಗಳ ಬಗ್ಗೆ ವಿವರಿಸಿದರು. ಚಾಮರಾಜನಗರ ಜಿಲ್ಲೆಯಲ್ಲಿ ನೂರಾರು ರವಳೇಶ್ವರ ಮೂರ್ತಿ ಮತ್ತು ಶಾಸನಗಳು ಪ್ರತಿ ಗ್ರಾಮದಲ್ಲೂ ಇದೆ ಎಂದು ತಿಳಿಸಿದರು.

ಗುಂಡ್ಲುಪೇಟೆ ಡಿಬಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇತಿಹಾಸ ಉಪನ್ಯಾಸಕ ಮಂಜುನಾಥ್ ಮಾತನಾಡಿ ಕರ್ನಾಟಕ ಇತಿಹಾಸ ಅಕಾಡೆಮಿಯಿಂದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಚಾಮರಾಜನಗರ ತಾಲೂಕಿನ ನರಸಮಂಗಲ, ಆಲೂರಿನ ದೇವಾಲಯಗಳು ಕೇಂದ್ರ ಪ್ರಾಚ್ಯ ಇಲಾಖೆಗೆ ಸೇರಿಸಲಾಗಿದೆ. ಇದರ ಇತಿಹಾಸ ತಿಳಿದು ಜಾಗೃತಿ ಮೂಡಿಸಿಕೊಳ್ಳುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುರೇಶ್ .ಎನ್ ಋಗ್ವೇದಿ ಮಾತನಾಡಿ ಯುವಕರು ಮತ್ತು ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಪುರಾತನ ದೇವಾಲಯಗಳನ್ನು, ಸ್ಮಾರಕಗಳನ್ನು ಶಾಸನಗಳನ್ನು, ವೀರಗಲ್ಲು ಮಾಸ್ತಿ ಕಲ್ಲುಗಳನ್ನು, ನಾಣ್ಯಗಳು ಮತ್ತು ವಿವಿಧ ಪಾರಂಪರಿಕ ವಸ್ತುಗಳನ್ನು ಹಾಳು ಮಾಡದೆ ಅದರ ಸಂರಕ್ಷಣೆ ಮಾಡಿ, ಪಠ್ಯದೊಂದಿಗೆ ಪಠ್ಯೇತರ ಸಾಂಸ್ಕೃತಿಕ ಪ್ರಜ್ಞೆಯನ್ನು ಹೆಚ್ಚಿಸಿಕೊಂಡು ನಮ್ಮ ಇತಿಹಾಸವನ್ನು ಉಳಿಸುವ ಕಾರ್ಯ ಮಾಡಬೇಕಾಗಿದೆ. ಶಾಸನಗಳು ನಮ್ಮ ಬದುಕಿನ ಕ್ರಮವನ್ನು ತಿಳಿಸುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವನಂಜಪ್ಪ ವಹಿಸಿ ಕರ್ನಾಟಕ ಇತಿಹಾಸ ಅಕಾಡೆಮಿ ಹಾಗೂ ವಿವಿಧ ಸಂಘಟನೆಗಳು ಇತಿಹಾಸದ ಪ್ರಜ್ಞೆ ಮೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯ. ಇಂದು ಆಧುನಿಕರಣದ ವ್ಯವಸ್ಥೆಯೊಳಗೆ ನಾವು ನಮ್ಮ ಸಂಸ್ಕೃತಿಯನ್ನು ಮರೆತಿದ್ದೇವೆ ಮತ್ತೆ ಪುನರಾವಲೋಕನವಾಗಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನೂರಾರು ಯುವಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು