News Karnataka Kannada
Monday, May 13 2024
ಚಾಮರಾಜನಗರ

ಚಾಮರಾಜನಗರ: ಗೃಹಿಣಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

Chamarajanagar: Housewife attacked with deadly weapon
Photo Credit : News Kannada

ಚಾಮರಾಜನಗರ: ಗೃಹಿಣಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲ್ಲೂಕಿನ ಮಂಗಲ ಹೊಸೂರಿನಲ್ಲಿ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ ಮಂಗಲ ಹೊಸೂರು ಗ್ರಾಮದಲ್ಲಿ ತಮಿಳುನಾಡು ಮೂಲದ ಕಾರ್ತಿಕ್ ಮತ್ತು ರಾಧಿಕರವರು ವ್ಯವಸಾಯ ಜಮೀನನನ್ನು ಗುತ್ತಿಗೆ ಪಡೆದು ಜೀವನ ಸಾಗಿಸುತ್ತಿದ್ದರು. ದಂಪತಿಗಳ ನಡುವೆ ಹಣಕಾಸಿನ ವಿಚಾರವಾಗಿ ಶನಿವಾರ ರಾತ್ರಿ ಜಗಳ ಉಂಟಾಗಿ, ಕಾರ್ತಿಕ್ ಗೆ ಕೋಪ ನೆತ್ತಿಗೇರಿ, ಮನೆಯಲ್ಲಿದ್ದ ಮಾರಕಾಸ್ತ್ರದಿಂದ ಪತ್ನಿ ರಾಧಿಕಾಳ ತಲೆಗೆ ಹೊಡೆದ ಪರಿಣಾಮ ಸ್ಥಳದಲ್ಲೇ ರಾಧಿಕ ಮೃತಪಟ್ಟಳು.

ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಸುದ್ದ ತಿಳಿಯುತ್ತದ್ದಂತೆ ಡಿ.ವೈ.ಎಸ್.ಪಿ ಲಕ್ಷ್ಮಯ್ಯ, ಸಂತೇಮರಹಳ್ಳಿ ಇನ್ಸ್ ಪೆಕ್ಟರ್ ಬಸವರಾಜು, ಸಬ್ ಇನ್ಸ್ ಪೆಕ್ಟರ್ ತಾಜುದ್ದೀನ್ , ಹನುಮಂತ ಉಪ್ಪಾರ್ ಸ್ಥಳಕ್ಕೆ ಭೇಟಿ ನೀಡಿ, ರಾಧಿಕಳನ್ನು ಹತ್ಯೆ ಮಾಡಿದ ಪತಿ ಕಾರ್ತಿಕ್ ನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ರಾಧಿಕಾಳಿಗೆ 6 ತಿಂಗಳ ಮಗುವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು