ಹುತಾತ್ಮ ಡಿಸಿಎಫ್‌ ಶ್ರೀನಿವಾಸನ್‌ ಕಟ್ಟಿಸಿದ್ದ ದೇವಾಲಯಕ್ಕೆ ನಿತ್ಯ ಪೂಜೆ

ಚಾಮರಾಜನಗರ : ಸಮಾಜಕ್ಕೆ ಹೀರೋ ಆದವರೊಬ್ಬರು ಹಾಗೂ ಕಾಡಿಗೆ ಕಂಟಕನಾಗಿದ್ದ ವ್ಯಕ್ತಿಯೊಬ್ಬರು. ಇವರಿಬ್ಬರೂ ಒಂದೇ ಗ್ರಾಮದಲ್ಲಿ ದೇವಾಲಯಗಳನ್ನು ಕಟ್ಟಿಸಿದ್ದು, ಒಂದರಲ್ಲಿ ನಿತ್ಯ ಪೂಜೆಯಾಗುತ್ತಿದ್ದರೇ ಇನ್ನೊಂದು ದೇವಾಸ್ಥಾನ ಭೂತ ಬಂಗಲೆಯಂತಾಗಿದೆ. ಚಾಮರಾಜನಗರ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅರಣ್ಯಾಧಿಕಾರಿಯಾಗಿದ್ದ ಶ್ರೀನಿವಾಸ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಮಾರಿಯಮ್ಮ ದೇವಾಸ್ಥಾನದಲ್ಲಿ ನಿತ್ಯ ಪೂಜೆ-ಪುನಸ್ಕಾರ ನಡೆಯುವ ಜೊತೆಗೆ ಶ್ರೀನಿವಾಸನ್ ಅವರ ಭಾವಚಿತ್ರಕ್ಕೆ ಪ್ರಥಮ ಪೂಜೆ ನಡೆಯುತ್ತಿದೆ. ಆದರೆ, ಕಾಡುಗಳ್ಳ ವೀರಪ್ಪನ್ ನಿಂದ ಜೀರ್ಣೋದ್ಧಾರಗೊಂಡ ಪೆರುಮಾಳ್ ದೇವಾಲಯಕ್ಕೆ ಯಾರೂ ಹೋಗದೇ ಭಣಭಣ ಎನ್ನುತ್ತಿದ್ದು‌, ಈಗಲೂ ವೀರಪ್ಪನ್ ಬಗ್ಗೆ ಒಂದು ನಿರ್ಲಕ್ಷ್ಯ ಈ ಊರಿನಲ್ಲಿ ಎದ್ದು ಕಾಣುತ್ತದೆ. ಬೇಟೆ ಮಾಡಿದ ಬಳಿಕ ಹಣ ಹಂಚಿಕೊಳ್ಳುವಾಗ ವೀರಪ್ಪನ್ ಗೆ ಎರಡು ಪಾಲು, ಉಳಿದವರಿಗೆ ಒಂದು ಪಾಲಿನ ಜೊತೆಗೆ ದೇವರಿಗೂ ಒಂದು ಪಾಲೆಂದು ಹಣ ಎತ್ತಿಡಲಾಗುತ್ತಿತ್ತು.‌ ದೇವರಿಗೆ ಎತ್ತಿಡುತ್ತಿದ್ದ ಹಣದಿಂದಲೇ ಪುದೂರು ಸಮೀಪದಲ್ಲಿ ಪೆರುಮಾಳ್ ದೇವಸ್ಥಾನವನ್ನು ವೀರಪ್ಪನ್ ಕಟ್ಟಿಸಿದ್ದ, ಪ್ರತಿ ವರ್ಷ ಜಾತ್ರೆ ಮಾಡಿ, ರಾತ್ರಿ ವೇಳೆ ನಾಟಕವನ್ನು ಆಡಿಸುತ್ತಿದ್ದ.‌ ಅದಾದ ಬಳಿಕ, ಪೊಲೀಸರು‌ ಅವನ ಮೇಲೆ ಹದ್ದಿನ ಕಣ್ಣಿಟ್ಟ ಬಳಿಕ ಜನರು‌‌ ದೇವಾಲಯಕ್ಕೆ ಹೋಗುವುದು ಕಡಿಮೆಯಾಯಿತು. ವೀರಪ್ಪನ್ ಸತ್ತ ಮೇಲೂ ಕೆಲವು ವರ್ಷ ಹಬ್ಬ ನಡೆದಿದೆಯಾದರೂ ಅಷ್ಟೇನೂ ಜನರು ಹೋಗುವುದಿಲ್ಲ ಎನ್ನುತ್ತಾರೆ ಗೋಪಿನಾಥಂ ಗ್ರಾಮಸ್ಥರು. ವೀರಪ್ಪನ್ ಪತ್ನಿ ಇಲ್ಲವೇ ಆತನ ಸಂಬಂಧಿಕರು ಆಗೊಮ್ಮೆ-ಈಗೊಮ್ಮೆ ತೆರಳಿ ಪೂಜೆ ಮಾಡಿ ಬರುತ್ತಾರೆ. ಉಳಿದ ಜನರಂತೂ ಯಾರೂ ಪೆರುಮಾಳ್ ದೇವಸ್ಥಾನಕ್ಕೆ ಹೋಗುವುದಿಲ್ಲ. ಅರಣ್ಯಾಧಿಕಾರಿ ಶ್ರೀನಿವಾಸ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಮಾರಿಯಮ್ಮ ದೇವಾಲಯದಲ್ಲಿ ನಿತ್ಯ ಪೂಜೆ ಪುರಸ್ಕಾರ ನಡೆಯುತ್ತಿದೆ, ಈಗಲೂ ನಮಗವರೂ ಸಾಹೇಬರೇ, ಅವರಿಗೆ ಪ್ರಥಮ ಪೂಜೆ ಎನ್ನುತ್ತಾರೆ ಗ್ರಾಮಸ್ಥರು. ಒಟ್ಟಿನಲ್ಲಿ ಒಳ್ಳೇತನಕ್ಕಷ್ಟೇ ಬೆಲೆ ಎಂಬುದಕ್ಕೆ ಈ ಇಬ್ಬರು ವ್ಯಕ್ತಿಗಳು ಕಟ್ಟಿಸಿದ ದೇವಾಲಯಗಳೇ ಸಾಕ್ಷಿಯಾಗಿದ್ದು ಜನರು ಎಷ್ಟೇ ಮುಂದುವರೆದರೂ ಕೊನೆತನಕ ಇರುವುದು ಸಮಾಜಮುಖಿ ಕೆಲಸಗಳಷ್ಟೇ ಎಂಬುದು ನಿಜವಾಗಿದೆ.

Temple
Modi

 

 

Indresh KC

Recent Posts

ಆರು ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಬದರಿನಾಥ

ಉತ್ತರಾಕಾಂಡ ಚಮೋಲಿಯಲ್ಲಿರುವ ಬದರಿನಾಥ ಬಾಗಿಲನ್ನು ಇಂದು(ಬಾನುವಾರ) ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು. ಈ ವೇಳೆ ವೇದ ಘೋಷಗಳು ಮತ್ತು ನೆರೆದಿದ್ದ…

12 mins ago

ಬಸವ ಭವನದ ಜಮೀನಿಗೆ ಪೂಜೆ ಮತ್ತು ಷಟಸ್ಥಲ ಧ್ವಜಾರೋಹಣ

ನಗರದ ನಾವದಗೇರೆ ಸಮೀಪದ ಸರ್ವೇ ನಂ. 60ರಲ್ಲಿ ಜಿಲ್ಲಾಡಳಿತದಿಂದ ಮೀಸಲಿಟ್ಟಿರುವ ಒಂದು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ…

38 mins ago

ಸಂಸ್ಕಾರದ ತೊಟ್ಟಿಲು ಸರಸ್ವತಿ ಶಾಲೆ : ಹಿರಿಯ ಶಿಕ್ಷಕಿ

ನಗರದ ಸರಸ್ವತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವನ್ನು ಬಹಳ…

50 mins ago

ತಮಿಳು ನಟ ಸಿಂಭು ಅವರನ್ನು ಚಿತ್ರರಂಗದಿಂದ ನಿಷೇಧಿಸುವಂತೆ ನಿರ್ದೇಶಕ ಒತ್ತಾಯ

ತಮಿಳು ಚಿತ್ರರಂಗದ ಜನಪ್ರಿಯ ನಟ ಸಿಂಭು ಅವರ ವಿರುದ್ಧ ಇದೀಗ ನಿರ್ದೇಶಕ ದೂರು ನೀಡಿದ್ದು ತಮಿಳು ಚಿತ್ರರಂಗದಿಂದ ಹೊರಗಟ್ಟಬೇಕು ಎಂದು…

1 hour ago

ಆಫೀಸ್‌ನಲ್ಲಿ ಒತ್ತಡಕ್ಕೆ ಒಳಗಾಗ್ತಿದ್ದೀರಾ : ಹಾಗಾದ್ರೆ ಇಲ್ಲಿದೆ ಟಿಪ್ಸ್‌

ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ…

2 hours ago

ಇಂದು 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…

2 hours ago