ಚಾಮರಾಜನಗರ: ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟ ಆದ ಪರಿಣಾಮ ಸುಮಾರು 60ಸಾವಿರ ನಗದು ಬೆಂಕಿಗಾಹುತಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನ ಬೀಡು ಗ್ರಾಮದ ಜಮೀನಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮ ಮಹದೇವಶೆಟ್ಟಿರವರಿಗೆ ಸೇರಿದ ತೋಟದ ಮನೆಯಲ್ಲಿ ಸ್ಪೋಟ ಸಂಭವಿಸಿದ್ದು, ಮನೆಯಲ್ಲಿದ್ದ ಮಕ್ಕಳ ಪುಸ್ತಕ, ದಾಖಲೆ ಪತ್ರಗಳು, ಹಾಗೂ 60 ಸಾವಿರ ರೂ ನಗದು ಬೆಂಕಿಗಾಹುತಿಯಾಗಿದೆ.
ಸಿಲಿಂಡರ್ ಸ್ಪೋಟ ಸಂಭವಿಸುವ ವೇಳೆ ಮನೆಯಲ್ಲಿದ್ದ ತಾಯಿ ಮತ್ತು ಮಕ್ಕಳಿಬ್ಬರು ಹೊರಗೆ ಇದ್ದುದರಿಂದ ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ. ಸಿಲಿಂಡರ್ ಸ್ಪೋಟ ಸುದ್ದಿ ತಿಳಿಯುತ್ತಿದ್ದಂತೆ ಗುಂಡ್ಲುಪೇಟೆಯಲ್ಲಿದ್ದ ಅಗ್ನಿ ಶಾಮಕ ದಳದವರು ಭೀಮನಭೀಡು ಗ್ರಾಮಕ್ಕೆ ಆಗಮಿಸಿ ಬೆಂಕಿ ನಂದಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.