News Karnataka Kannada
Sunday, April 28 2024
ಚಾಮರಾಜನಗರ

ಸಿಲಿಂಡರ್ ಸ್ಪೋಟ: ನಗದು ಬೆಂಕಿಗಾಹುತಿ

Bengaluru: A cylinder for commercial use will be reduced to a small extent from today
Photo Credit :

ಚಾಮರಾಜನಗರ: ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟ ಆದ ಪರಿಣಾಮ ಸುಮಾರು 60ಸಾವಿರ ನಗದು ಬೆಂಕಿಗಾಹುತಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನ ಬೀಡು ಗ್ರಾಮದ ಜಮೀನಿನಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮ ಮಹದೇವಶೆಟ್ಟಿರವರಿಗೆ ಸೇರಿದ ತೋಟದ ಮನೆಯಲ್ಲಿ ಸ್ಪೋಟ ಸಂಭವಿಸಿದ್ದು, ಮನೆಯಲ್ಲಿದ್ದ ಮಕ್ಕಳ ಪುಸ್ತಕ, ದಾಖಲೆ ಪತ್ರಗಳು, ಹಾಗೂ 60 ಸಾವಿರ ರೂ ನಗದು ಬೆಂಕಿಗಾಹುತಿಯಾಗಿದೆ.

ಸಿಲಿಂಡರ್ ಸ್ಪೋಟ ಸಂಭವಿಸುವ ವೇಳೆ ಮನೆಯಲ್ಲಿದ್ದ ತಾಯಿ ಮತ್ತು ಮಕ್ಕಳಿಬ್ಬರು ಹೊರಗೆ ಇದ್ದುದರಿಂದ ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ. ಸಿಲಿಂಡರ್ ಸ್ಪೋಟ ಸುದ್ದಿ ತಿಳಿಯುತ್ತಿದ್ದಂತೆ ಗುಂಡ್ಲುಪೇಟೆಯಲ್ಲಿದ್ದ ಅಗ್ನಿ ಶಾಮಕ ದಳದವರು ಭೀಮನಭೀಡು ಗ್ರಾಮಕ್ಕೆ ಆಗಮಿಸಿ ಬೆಂಕಿ ನಂದಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು