ಚಾಮರಾಜನಗರ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸ್ಪೋಟಗೊಂಡ ಪರಿಣಾಮ ಮನೆಯೊಳಗಿದ್ದ ಯುವಕ ಸಾವನ್ನಪ್ಪಿದ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸ್ವಾಮಿ (27) ಗ್ಯಾಸ್ ಸ್ಫೋಟದಿಂದ ದುರಂತ ಸಾವನ್ನಪ್ಪಿದ ದುರ್ದೈವಿ. ಈತನ ತಂದೆ ತಾಯಿ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಅಜ್ಜಿ ಮತ್ತು ಚಿಕ್ಕಮ್ಮನ ಜೊತೆ ಇದ್ದ ಸ್ವಾಮಿ ವಾಸ ಮಾಡುತ್ತಿದ್ದನು. ಈ ನಡುವೆ ಹೊಸ ಮನೆ ಕಟ್ಟಿಸುತ್ತಿದ್ದರಿಂದ ಅದರ ಗೃಹ ಪ್ರವೇಶವಾಗದ ಹಿನ್ನಲೆಯಲ್ಲಿ ಅಲ್ಲಿ ಚಿಕ್ಕಮ್ಮ ಮತ್ತು ಅಜ್ಜಿ ಅಲ್ಲಿ ಮಲಗಿದ್ದರೆ, ಇತ್ತ ಹಳೆ ಮನೆಯಲ್ಲಿ ಸ್ವಾಮಿ ಮಲಗಿದ್ದನು.
ಈ ನಡುವೆ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆ ಆಗಿರುವುದು ಸ್ವಾಮಿಯ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ರಾತ್ರಿ ಈತ ಮೇಣದ ಬತ್ತು ಹತ್ತಿಸಲು ಬೆಂಕಿ ಕಡ್ಡಿ ಕೀರಿದಾಗ ಗ್ಯಾಸ್ ಹೊತ್ತಿ ಇಡೀ ಮನೆ ಉರಿದು ಆತನೂ ಸಜೀವ ದಹನವಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.