ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೆಳಚವಾಡಿ ಗ್ರಾಮದ ಹೊರವಲಯದಲ್ಲಿ ಹಾಕಲಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಫ್ಲೆಕ್ಸ್ ನಲ್ಲಿ ಅಂಬೇಡ್ಕರ್ ಕತ್ತನ್ನು ಕತ್ತರಿಸಿದಲ್ಲದೆ, ಎದೆಯ ಭಾಗವನ್ನು ಚಂದ್ರನ ಗುರುತು ಬರುವಂತೆ ಕತ್ತರಿಸಿ, ಪಕ್ಕದಲ್ಲಿ 786 ಎಂದು ಕತ್ತರಿಸಿ ವಿಕೃತ ಮೆರೆದಿದ್ದಾರೆ.
ಈ ಸಂಬಂಧವಾಗಿ ಬೇಗೂರು ಪೊಲೀಸ್ ಠಾಣೆಯ ಸಬ್ ಇನ್ ಪೆಕ್ಟರ್ ರವರಿಗೆ ವಾಟ್ಸ್ ಆಫ್ ಮೂಲಕ ಸಾರ್ವಜನಿಕರು ವಿರೂಪಗೊಳಿಸಿದ ಫ್ಲೆಕ್ಸ್ ಪೋಟೋವನ್ನು ಕಳುಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.