ಚಾಮರಾಜನಗರ : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗಲು ತಮಿಳುನಾಡಿನ ಓಂ ಶಕ್ತಿಗೆ ತೆರಳಿದ ಬಂದ ಮಾಲಾಧಾರಿಗಳೇ ಕಾರಣ ಎನ್ನಲಾಗುತ್ತಿದ್ದು ಈ ನಡುವೆ ಓಂಶಕ್ತಿ ಪ್ರವಾಸ ತೆರಳಿದ್ದ ಬಾಲಕನೊಬ್ಬ ಕೊರನಾದಿಂದ ಮೃತಪಟ್ಟಿದ್ದಾನೆ
ಚಾಮರಾಜನಗರ ತಾಲ್ಲೂಕಿನ ಕಣ್ಣೇಗಾಲ ಗ್ರಾಮದಲ್ಲಿ 55 ಮಂದಿ ಓಂ ಶಕ್ತಿ ಮಾಲಾದಾರಿಗಳು ಓಂ ಶಕ್ತಿಗೆ ದರ್ಶನ ಪಡೆದು ಧರ್ಮಸ್ಥಳಕ್ಕೆ ತರಳಿ ಶ್ರೀ ಮಂಜುನಾಥ್ ದರ್ಶನ ಪಡೆದು ವಾಪಸ್ಸಾಗುವಾಗ ಜೊತೆಯಲ್ಲಿದ್ದ 11 ವರ್ಷದ ಬಾಲಕನಲ್ಲಿ ಅನಾರೋಗ್ಯ ಕಾಣಿಸಿಕೊಂಡು ಹಾಸನದಲ್ಲಿ ಚಿಕಿತ್ಸೆ ಪಡೆದು ಚಾಮರಾಜನಗರಕ್ಕೆ ಬರುವ ವೇಳೆ ಮಾರ್ಗ ಮಧ್ಯೆ ಬಾಲಕ ಮೃತ ಪಟ್ಟಿದ್ದಾನೆ, ಹಾಸನದಲ್ಲಿ ಆರ್ ಟಿ ಪಿ ಸಿ ಆರ್ ಪರೀಕ್ಷೆ ಮಾಡಿದಾಗ ನೆಗಟಿವ್ ರಿಪೋರ್ಟ್ ಬಂದಿತ್ತು. ನಂತರ ಮರಣೊತ್ತರ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ ಎಂದು ಓಂ ಶಕ್ತಿಗೆ ತರಳಿದ್ದವರು ಹೇಳಿದ್ದಾರೆ.
ಇನ್ನು ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ 60 ಮಂದಿ ಮಾಲಾಧಾರಿಗಳು ಓಂ ಶಕ್ತಿಗೆ ತೆರಳಿ ಬಂದಿದ್ದು, ಅವರನ್ನು ತಪಾಸಣೆಗೆ ಒಳಪಡಿಸಿದಾಗ 13 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ.